ಬಿಲಾಸ್ಪುರ್: ಈಗ ದೇಶಭಕ್ತಿ ಎಂಬುದು ಸಾಮಾಜಿಕ ಜಾಲತಾಣಗಳಿಗೆ ಮಾತ್ರ ಸೀಮಿತವಾಗಿದೆ. ಅದನ್ನು ಬಿಟ್ಟರೆ ಆಗಸ್ಟ್ 15ರಂದು, ಜನವರಿ 26ರಂದು ದೇಶದ ಬಗ್ಗೆ ಅಭಿಮಾನ ವ್ಯಕ್ತಪಡಿಸುತ್ತೇವೆ. ದೇಶದ ಪರ ನಾಲ್ಕು ಘೋಷಣೆ ಕೂಗಿ ಮರುದಿನ ಸುಮ್ಮನಾಗುತ್ತೇವೆ. ನಮಗೆ ನಮ್ಮ ವೈಯಕ್ತಿಕ ಸುಖ, ಸಂತೋಷ ಮುಖ್ಯವಾಗಿರುತ್ತದೆಯೇ ಹೊರತು ದೇಶವಲ್ಲ.
ಇಂತಹ ಈ ಕಾಲದಲ್ಲೂ ಛತ್ತೀಸ್ಗಢದ ಬಿಲಾಸ್ಪುರ್ ದ ಕೋಟಾ ವಾರ್ಡ್ ದೇಶಕ್ಕಾಗಿ ಸೇವೆ ಮಾಡುವುದು, ದೇಶಕ್ಕಾಗಿ ಸಾಯುವುದು ಎಂಬುದರ ನಿಜವಾದ ಅರ್ಥವನ್ನು ನಮಗೆ ತೋರಿಸಿಕೊಟ್ಟಿದೆ.
ಕೋಟಾ ವಾರ್ಡ್ ಈಗಾಗಲೇ ತನ್ನ 25 ಯುವಕರನ್ನು ಗಡಿಯಲ್ಲಿ ದೇಶದ ರಕ್ಷಣೆ ಮಾಡಲಿ ಎಂಬ ಆಶಯದೊಂದಿಗೆ ಸೇನೆಗೆ ಕಳುಹಿಸಿಕೊಟ್ಟಿದೆ. ಈ ವಾರ್ಡ್ ಇನ್ನೂ ಹಲವಾರು ಯುವಕರು ಸೇನೆ ಸೇರುವ ಹಾದಿಯಲ್ಲಿದ್ದಾರೆ. ಕೆಲವರು ಇದಕ್ಕಾಗಿ ತಾಂತ್ರಿಕ ತರಬೇತಿಗಳನ್ನು ಪಡೆಯುತ್ತಿದ್ದಾರೆ. ಕೆಲವರಂತು ಬಾಲ್ಯದಿಂದಲೇ ಸೇನಾ ನೇಮಕಾತಿಗಾಗಿ ಸಜ್ಜಾಗುತ್ತಿದ್ದಾರೆ.
ಒಬ್ಬ ಮಗನನ್ನು ಹೊಂದಿರುವ ಪೋಷಕರು ಕೂಡ ತನ್ನ ಮಗನನ್ನು ಸೇನೆಗೆ ಕಳುಹಿಸಲು ಹಿಂಜರಿಯುತ್ತಿಲ್ಲ. ತಂದೆ, ತಾಯಿ, ಸಹೋದರಿಯರು ಮಗನ ಧೀರ್ಘಾಯುಷ್ಯಕ್ಕಾಗಿ, ಯಶಸ್ಸಿಗಾಗಿ ನಿತ್ಯ ಪ್ರಾರ್ಥನೆ ಮಾಡುತ್ತಾರೆ. ಸೇನೆಗೆ ಸೇರಿ ದೇಶ ಸೇವೆ ಮಾಡಬೇಕು ಎಂಬುದೊಂದೆ ಇವರ ಜೀವನದ ಏಕ ಮಾತ್ರ ಗುರಿ.
ಸಾಮಾಜಿಕ ಜಾಲತಾಣಗಳ ದೇಶಭಕ್ತಿಯ ಕಾಲದಲ್ಲೂ ಇಲ್ಲಿನ ಯುವಕರು ನಿಜವಾದ ದೇಶ ಸೇವೆ ಮಾಡಲು ಸಜ್ಜಾಗುತ್ತಿರುವುದು ನಿಜಕ್ಕೂ ಈ ದೇಶದ ಯುವ ಜನತೆಗೆ ಸ್ಫೂರ್ತಿದಾಯಕ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.