ಮುಂಬಯಿ: ರಾಷ್ಟ್ರೀಯತೆಯ ಸಿದ್ಧಾಂತದ ತಳಹದಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆರ್ಎಸ್ಎಸ್ ದೇಶದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿದೆ ಮತ್ತು ತನ್ನ ಶಾಖೆಗಳನ್ನು ವಿಸ್ತರಿಸಿಕೊಳ್ಳುತ್ತಿದೆ. ಶಿಸ್ತು, ಪ್ರಾರ್ಥನೆ, ರಾಷ್ಟ್ರಪ್ರೇಮವನ್ನು ಎಳವೆಯಲ್ಲಿಯೇ ಮೈಗೂಡಿಸುವ ಸಲುವಾಗಿ ಹಲವಾರು ಪೋಷಕರು ತಮ್ಮ ಮಕ್ಕಳನ್ನು ಶಾಖೆಗಳಿಗೆ ಕಳುಹಿಸುತ್ತಿದ್ದಾರೆ. ಹೀಗಾಗಿ ಬಾಲ ಸ್ವಯಂಸೇವಕರ ಸಂಖ್ಯೆಯಲ್ಲಿ ವರ್ಷದಿಂದ ವರ್ಷಕ್ಕೆ ಗಣನೀಯ ಏರಿಕೆಯಾಗುತ್ತಿದೆ.
ಶಾಖೆ ಎಂಬುದು ಆರ್ಎಸ್ಎಸ್ನ ಸಣ್ಣ ವಿಭಾಗ. ಇಲ್ಲಿ ವ್ಯಾಯಾಮ, ಕ್ರೀಡೆ, ಪ್ರಾರ್ಥನೆ, ರೂಟ್ ಮಾರ್ಚ್ ಎಲ್ಲವನ್ನೂ ಕಲಿಸಿಕೊಡಲಾಗುತ್ತದೆ, ಒಬ್ಬ ವ್ಯಕ್ತಿಯನ್ನು ಸೇನಾನಿಯಂತೆ ರೂಪಿಸಲಾಗುತ್ತದೆ. ಕಳೆದ 5 ವರ್ಷದಲ್ಲಿ ಈ ಶಾಖೆಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಕಳೆದ 5 ವರ್ಷದಲ್ಲಿ ನಿತ್ಯ ಶಾಖೆಗಳು ಶೇ.29ರಷ್ಟು ಹೆಚ್ಚಾಗಿದೆ, ವಾರ ಶಾಖೆಗಳು ಶೇ.61ರಷ್ಟು ಮತ್ತು ಮಾಸಿಕ ಶಾಖೆಗಳು ಶೇ.40ರಷ್ಟು ಹೆಚ್ಚಾಗಿದೆ. ಇದು ಆರ್ಎಸ್ಎಸ್ನ ಪ್ರಗತಿ ಮತ್ತು ಅದರೆಡೆಗೆ ಜನರಿಗಿರುವ ಆಸಕ್ತಿಯನ್ನು ತೋರಿಸುತ್ತದೆ.
2013-14ಮತ್ತು 2014-15ರ ಸಾಲಿನಲ್ಲಿ ದೇಶದಾದ್ಯಂತ ಆರ್ಎಸ್ಎಸ್ ಶಾಖೆಗಳ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗಿದೆ. 2015ರಲ್ಲಿ ದೇಶದಾದ್ಯಂತ ಪ್ರತಿದಿನ 51,335 ಶಾಖೆಗಳು ನಡೆಯುತ್ತದೆ. ಇದು ಅದರ ಸಂಘಟನಾ ಚತುರತೆಗೆ ಹಿಡಿದ ಕೈಗನ್ನಡಿ.
ಟೀಕಾಕಾರರು ತಮ್ಮನ್ನು ತೀವ್ರವಾದಿ ಸಂಘಟನೆ ಎಂದು ಕರೆದರೂ, ಆರ್ಎಸ್ಎಸ್ಸಿಗರು ಮಾತ್ರ ತಮ್ಮನ್ನು ತಾವು ಹಿಂದೂ ರಾಷ್ಟ್ರವಾದಿಗಳೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಆದರೆ ಆರ್ಎಸ್ಎಸ್ನ ಸಂಘಟನ ಕೌಶಲ್ಯಕ್ಕೆ ಸರಿಸಾಟಿಯಾದುದು ಯಾವುದು ಇಲ್ಲ ಎಂಬುದನ್ನು ಅದರ ಟೀಕಾಕಾರರು ಕೂಡ ಒಪ್ಪಿಕೊಳ್ಳುತ್ತಾರೆ.
ಆರ್ಎಸ್ಎಸ್ ಒಟ್ಟು 38 ಸೈದ್ಧಾಂತಿಕ ಅಂಗಗಳನ್ನು ಹೊಂದಿದೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಷಾ, ಎಲ್ಕೆ ಅಡ್ವಾಣಿಯಂತಹ ಘಾಟಾನುಘಟಿಗಳು ಆರ್ಎಸ್ಎಸ್ ಗರಡಿಯಲ್ಲಿ ಪಳಗಿದವರು. ಆದರೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಆರ್ಎಸ್ಎಸ್ ಮತ್ತಷ್ಟು ಪ್ರಗತಿ ಕಂಡಿದೆ ಎಂಬ ಒಂದು ಮೂಲದ ವಾದವನ್ನು ಒಪ್ಪುವುದಿಲ್ಲ ಎಂದು ಆರ್ಎಸ್ಎಸ್ ಕೊಂಕಣ್ ವಿಭಾಗದ ಮಾಧ್ಯಮ ಸಂಯೋಜಕ ಪ್ರಮೋದ್ ಬಾಪಟ್ ಹೇಳಿದ್ದಾರೆ.
ಒಂದು ದಶಕಗಳ ಕಾಲ ಕಾಂಗ್ರೆಸ್ ಆಡಳಿತವಿದ್ದಾಗಲೂ ಆರ್ಎಸ್ಎಸ್ ಬೆಳೆದಿದೆ. ಬಿಜೆಪಿ ಸರ್ಕಾರವಿಲ್ಲದ ಕೇರಳದಲ್ಲಿ 4,500 ಶಾಖೆಗಳಿವೆ. ಇದು ದೇಶದಲ್ಲಿ ಅತಿಹೆಚ್ಚು ಶಾಖೆಗಳನ್ನು ಹೊಂದಿರುವ ರಾಜ್ಯ. ಪಶ್ಚಿಮಬಂಗಾಳದಲ್ಲೂ ಆರ್ಎಸ್ಎಸ್ ತುಂಬಾನೇ ಬಲಿಷ್ಠವಾಗಿದೆ. ಜನರು ಆರ್ಎಸ್ಎಸ್ನ ಸಿದ್ಧಾಂತಗಳನ್ನು ನೋಡುತ್ತಾರೆಯೇ ಹೊರತು, ರಾಜಕೀಯ ಪ್ರಾಬಲ್ಯವನ್ನಲ್ಲ ಎಂಬುದು ಇದರಿಂದ ಸ್ಪಷ್ಟವಾಗಿದೆ.
ಸಾಮಾಜಿಕ ಜಾಲತಾಣದಲ್ಲೂ ಸಕ್ರಿಯವಾಗಿರುವ ಆರ್ಎಸ್ಎಸ್ 15 ಲಕ್ಷ ಫೇಸ್ಬುಕ್ ಲೈಕ್ಸ್ಗಳನ್ನು ಪಡೆದಿದೆ. ಟ್ವಿಟರ್ನಲ್ಲಿ 1.5 ಲಕ್ಷ ಫಾಲೋವರ್ಗಳಿದ್ದಾರೆ. ಆರ್ಎಸ್ಎಸ್ ಕೇವಲ ನಗರ ಪ್ರದೇಶಗಳನ್ನು ಮಾತ್ರವಲ್ಲದೇ, ದೇಶದ ಮೂಲೆ ಮೂಲೆಯ 55ಸಾವಿರ ಹಳ್ಳಿಗಳನ್ನೂ ತಲುಪಿದೆ. ಒಡೆದು ಹೋಗಿದ್ದ ಹಿಂದೂಗಳು ಆರ್ಎಸ್ಎಸ್ನಿಂದಾಗಿ ಒಗ್ಗಟ್ಟಾಗುತ್ತಿದ್ದಾರೆ ಎಂದು ಬಾಪಟ್ ಹೇಳುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.