News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ರೂ 1,05,000 ಸಂಗ್ರಹಿಸಿ 5 ಅಶಕ್ತ ಕುಟುಂಬಗಳಿಗೆ ನೆರವು ನೀಡಿದ ಅಮೃತಸಂಜೀವಿನಿ ಸಂಸ್ಥೆ

ಮಂಗಳೂರು: ಅಮೃತಸಂಜೀವಿನಿ  ಸೇವಾಸಂಸ್ಥೆಯು ತನ್ನ ಸೇವಾ ಪಯಣದ 65  ಮಾಸಿಕ ಯೋಜನೆಗಳಲ್ಲಿ ಸಮಾಜ ಸೇವಾಸಕ್ತರಿಂದ ಧನ ಸಂಗ್ರಹಿಸಿ ಒಟ್ಟು ಮೊತ್ತ 1,05,000 ಗಳನ್ನು 5 ಅಶಕ್ತ ಕುಟುಂಬಗಳಿಗೆ ಅಶಕ್ತರಿಗೆ ನೀಡುವ ಮೂಲಕ ಆಸರೆಯಾಗಿದೆ.

ಅಮೃತಸಂಜೀವಿನಿ ಸಂಸ್ಥೆಯು ಸಾಮಾಜಿಕ ಜಾಲತಾಣವನ್ನು ಸದುಪಯೋಗಪಡಿಸಿಕೊಂಡು ಸಮಾಜದ ಮುಂದೆ ಅಶಕ್ತರ ಸಮಸ್ಯೆಯನ್ನು ವಿವರಿಸಿ ಆ ಮೂಲಕ ಸಂಗ್ರಹಿಸಿದ ಮೊತ್ತವನ್ನು ಅಶಕ್ತರಿಗೆ ತಿಂಗಳ ಮೂರನೇ ಆದಿತ್ಯವಾರದಂದು ನೀಡಲಾಗುತ್ತದೆ.

ಈ ತಿಂಗಳ ಯೋಜನೆಗೆ ಅರ್ಹವಾದ ಒಟ್ಟು ನಾಲ್ಕು ಕುಟುಂಬಗಳಿಗೆ 1,05,000 ಹಣವನ್ನು ಸಂಗ್ರಹಿಸಿ ನೀಡಿದೆ. ಬೆಳ್ತಂಗಡಿ ಕಾಶಿಪಟ್ನ ಗ್ರಾಮದ ಕಿಶೋರ್ ಅವರ ಅರೋಗ್ಯ ಸಮಸ್ಯೆಗೆ ₹25,000 , ಕಾಲು ಹಾಗೂ ಬೆನ್ನುಮೂಳೆ ಮುರಿತಕ್ಕೊಳಗಾದ ಸುಧಾಕರ್ ಕುಲಾಲ್ ಅವರ ಚಿಕಿತ್ಸೆಗೆ 25,000 ರೂ. ಕಿಡ್ನಿ ವೈಫಲ್ಯತೆಯಿಂದ ಬಲಳುತ್ತಿರುವ ಬೆಳ್ತಂಗಡಿ ಮಲವಂತಿಗೆ ಗ್ರಾಮದ ಗಂಗಯ್ಯ ನಲಿಕೆ ಅವರಿಗೆ 25,000, ಪಾರ್ಶವಾಯು ಹಾಗೂ ಲಘ ಹೃದಯಾಘಾತಕ್ಕೊಳಗಾದ ಹೊನ್ನಮ್ಮ ಅವರಿಗೆ 25,000 ಹಾಗೂ‌ ತುರ್ತು ಯೋಜನೆಯನ್ನು ಬಂಟ್ವಾಳ ವಗ್ಗ ಪ್ರದೇಶದ ಸುರೇಶ್ ಅವರಿಗೆ 5,000 ಧನಸಹಾಯವನ್ನು ನೀಡಲಾಗಿದೆ.

ಅಮೃತಸಂಜೀವಿನಿ ರಿ. ಸೇವಾ ಸಂಸ್ಥೆಯು ತನ್ನ 5 ವರ್ಷಗಳ ಸೇವಾವಧಿಯಲ್ಲಿ ಈ ವರೆಗೆ ಒಟ್ಟು 92 ಲಕ್ಷಕ್ಕೂ ಹೆಚ್ಚು ಧನಸಹಾಯವನ್ನು ಅಶಕ್ತರಿಗೆ ನೀಡಿಕೊಂಡು ಬಂದಿದ್ದು, ಆ ಮೂಲಕ ಸಮಾಜಕ್ಕೆ ಮಾದರಿಯಾಗಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top