ನವದಹಲಿ: ಗ್ರಾಮೀಣ, ಮತ್ತು ಬುಡಕಟ್ಟು ಪ್ರದೇಶದ ಜನರಿಗೆ ದೆಹಲಿ ಸರ್ಕಾರವು ಸೌರ ಚಾಲಿತ ಕುಕ್ಕರ್ ಹಾಗೂ ’ಉನ್ನತ್ ಚುಲ್ಹಾ’ ವಿತರಿಸುವ ಮೂಲಕ ಸೌರ ಚಾಲಿತ ಉಪಕರಣ ಮತ್ತು ಸೌರ ವಿದ್ಯುತ್ ಸೌಲಭ್ಯವನ್ನು ಒದಗಿಸಲು ಚಿಂತಿಸಿದೆ.
ಸರ್ಕಾರವು ಅರಣ್ಯೀಕರಣ ನಿಧಿ ಪರಿಹಾರ ವ್ಯವಸ್ಥೆ ಮತ್ತು ಯೋಜನಾ ಪ್ರಾಧಿಕಾರ ನಿಧಿ ಬಳಸಿ ಈ ಸೌಲಭ್ಯ ನೀಡಲಿದೆ. ಬುಡಕಟ್ಟು ಜನಾಂಗ, ಅರಣ್ಯ ಗಡಿ ಪ್ರದೇಶ ಹಾಗೂ ರಕ್ಷಿತ ಪ್ರದೇಶದ ಜನರಿಗೆ ಹೊಸ ಮತ್ತು ನವೀಕರಿಸಬಹುದಾದ ಸಾಧನಗಳ ವಿತರಣೆಗೆ ಇಂಧನ ಸಚಿವಾಲಯವು ಮುಂದಾಗಿದೆ ಎಂದು ಹೇಳಿದೆ.
ಈ ಯೋಜನೆಯಡಿ ಸೌರ ಕುಕ್ಕರ್, ಉನ್ನತ್ ಚುಲ್ಹಾ, ಸೌರ ವಿದ್ಯುತ್, ಸೌರ ದೀಪಗಳು ಹಾಗೂ ಸೌರ ಮನೆ ದೀಪ ಮೊದಲಾದ ಸಾಧನಗಳನ್ನು ಒದಗಿಸಲಿದೆ. ಈ ಯೋಜನೆಯನ್ನು ಅರಣ್ಯ ರಕ್ಷಣೆ, ಸಂರಕ್ಷಣೆ, ಸಂರಕ್ಷಿತ ಪ್ರದೇಶಗಳ ನಿರ್ವಹಣೆ ಸೂಚನೆ ಅಡಿಯಲ್ಲಿ ತರಲಾಗಿದೆ.
ಈ ಸಂಬಂಧ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಸಹಕರಿಸುವಂತೆ ಇಂಧನ ಸಚಿವಾಲಯವು ಕೋರಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.