ಹುಬ್ಬಳ್ಳಿ: ಲಘು ಉದ್ಯೋಗ ಭಾರತಿ ವತಿಯಿಂದ ಹುಬ್ಬಳ್ಳಿಯಲ್ಲಿ ಆಯೋಜಿಸಲ್ಪಡುತ್ತಿರುವ ಗ್ರಾಮೀಣ ಕುಶಲಕರ್ಮಿಗಳಿಂದ ತಯಾರಿಸಲ್ಪಟ್ಟ ಉತ್ಪನ್ನಗಳ ಪ್ರದರ್ಶನ ಮೇಳ ʼಗ್ರಾಮ ಶಿಲ್ಪಿʼ ಕಾರ್ಯಕ್ರಮ ಆರಂಭಗೊಂಡಿದೆ. ಕಣ್ಣೇರಿ ಮಠದ ಪೂಜ್ಯ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಗಳು ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಆರ್ಎಸ್ಎಸ್ ಸಹಸರಕಾರ್ಯವಾಹ ಮುಕುಂದ್ ಸಿ.ಆರ್ ಪ್ರಮುಖ ಭಾಷಣ ಮಾಡಿದರು.
ಎಪ್ರಿಲ್ 9, 10, 11ರಂದು ಮೂರು ದಿನಗಳ ಕಾಲ ಹುಬ್ಬಳ್ಳಿಯ ಗೋಕುಲ್ ರಸ್ತೆಯ ಸಾಮ್ರಾಟ್ ಹಾಲ್ನಲ್ಲಿ ಈ ಗ್ರಾಮ ಶಿಲ್ಪಿ ಕಾರ್ಯಕ್ರಮ ನಡೆಯಲಿದ್ದು, ಕರ್ನಾಟಕದ ಉತ್ತರ ಭಾಗದ 11 ಜಿಲ್ಲೆಗಳ ಸುಮಾರು 130 ಕುಶಲಕರ್ಮಿಗಳು ಭಾಗಿಯಾಗಲಿದ್ದಾರೆ. ಮೂರು ದಿನಗಳ ಮೇಳದಲ್ಲಿ ಬೇರೆ ಬೇರೆ ಕಾರ್ಯಕ್ರಮಗಳು ನಡೆಯಲಿದೆ.
ಕುಶಲಕರ್ಮಿಗಳಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು, ಪ್ರದರ್ಶಿಸಲು ಮೇಳದಲ್ಲಿ ಬೂತ್ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ. ಇನ್ನೊಂದೆಡೆ ತರಬೇತಿ ನೀಡುವ ಕಾರ್ಯ ನಡೆಯಲಿದೆ. ಮತ್ತೊಂದೆಡೆ ಅವರಿಗೆ ಈಗಿನ ಮಾರುಕಟ್ಟೆ ವ್ಯವಸ್ಥೆ, ಈಗಿನ ಟ್ರೆಂಡ್, ನಾವೀನ್ಯತೆ, ಬ್ಯಾಂಕಿಂಗ್ ಸೌಲಭ್ಯ ಇತ್ಯಾದಿಗಳ ಬಗ್ಗೆ ಮಾಹಿತಿಯನ್ನು ನೀಡುವ ಕಾರ್ಯ ನಡೆಯಲಿದೆ. ವರ್ಕ್ಶಾಪ್ ಆಯೋಜನೆಗೊಳ್ಳಲಿದೆ. ಎಪ್ರಿಲ್ 11ರಂದು ಸಮಾರೋಪ ನಡೆಯಲಿದೆ.
ಕೊರೋನಾ ನಿಯಮಾವಳಿಗಳ ಅಡಿಯಲ್ಲಿ ಮೇಳ ನಡೆಯುತ್ತಿರುವ ಕಾರಣ ಹೆಚ್ಚು ಜನ ಭಾಗಿಯಾಗುವಂತಿಲ್ಲ. ಹೀಗಾಗಿ ಭಾಗಿಯಾಗುತ್ತಿರುವ ಕುಶಲಕರ್ಮಿಗಳ ಉತ್ಪನ್ನಗಳಿಗೆ ಧೀರ್ಘಕಾಲದ ಮಾರುಕಟ್ಟೆ ಸೌಲಭ್ಯ ಒದಗಿ ಬರುವಂತೆ ಮಾಡಲು ಪ್ರತಿಯೊಬ್ಬ ಕುಶಲಕರ್ಮಿಯ ಸುಮಾರು 6-7 ನಿಮಿಷಗಳ ವಿಡಿಯೋ ಶೂಟ್ ಮಾಡಲಾಗುತ್ತದೆ. ಇದರಲ್ಲಿ ಆತನ ಉತ್ಪನ್ನ, ಅದರ ವಿಶಿಷ್ಟತೆ, ಪ್ರಯೋಜನ ಇತ್ಯಾದಿಗಳ ವಿವರ ಇರಲಿದೆ. ಇಂಗ್ಲೀಷ್ ಸಬ್ ಟೈಟಲ್ ಹೊಂದಿರುವ ಈ ವಿಡಿಯೋವನ್ನು ಯುಟ್ಯೂಬ್ ಸೇರಿದಂತೆ ವಿವಿಧ ಆನ್ಲೈನ್ ವೇದಿಕೆಯಲ್ಲಿ ಹಂಚಿಕೊಳ್ಳುವುದರಿಂದ ದೇಶವ್ಯಾಪಿಯಾಗಿ ಉತ್ಪನ್ನಕ್ಕೆ ಪ್ರಚಾರ ಸಿಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.