ಅಯೋಧ್ಯೆ: ರಾಮ ಮಂದಿರ ಚಳವಳಿಯ ಸಂದರ್ಭದಲ್ಲಿ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಮೃತಪಟ್ಟ ಇಬ್ಬರು ಸಹೋದರರಾದ ರಾಮ್ ಕುಮಾರ್ ಕೊಠಾರಿ ಮತ್ತು ಶರದ್ ಕುಮಾರ್ ಕೊಠಾರಿ ಅವರ ಹೆಸರಿನ್ನು ಅಯೋಧ್ಯೆಯ ಹೊಸ ರಸ್ತೆಗೆ ಇಡಲಾಗುತ್ತಿದೆ.
ಉತ್ತರಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಈ ಘೋಷಣೆ ಮಾಡಿದ್ದಾರೆ.
ಕೊಠಾರಿ ಬ್ರದರ್ಸ್ 1990 ರ ಅಕ್ಟೋಬರ್ನಲ್ಲಿ ಕರ ಸೇವೆಯಲ್ಲಿ ಭಾಗವಹಿಸಲು ಕೋಲ್ಕತ್ತಾದಿಂದ ಅಯೋಧ್ಯೆಗೆ ಬಂದಿದ್ದರು. ಕರ ಸೇವೆಯಲ್ಲಿ ಭಾಗಿಯಾಗಿದ್ದಾಗ ಅವರನ್ನು ಪೊಲೀಸರು ಕೊಂದರು. ಆ ವೇಳೆ ರಾಮ್ ಕುಮಾರ್ ಕೊಠಾರಿ ಅವರಿಗೆ 23 ವರ್ಷ ಮತ್ತು ಶರದ್ ಅವರಿಗೆ ಕೇವಲ 20 ವರ್ಷ ಆಗಿತ್ತು.
ಅವರ ಮರಣದ ನಂತರ, ಇಬ್ಬರು ಸಹೋದರರನ್ನು ರಾಮಜನ್ಮಭೂಮಿ ಚಳವಳಿಯ ವೀರರು ಮತ್ತು ಹುತಾತ್ಮರೆಂದು ಪ್ರಶಂಸಿಸಲಾಗಿದೆ.
ಕೊಠಾರಿ ಸಹೋದರರ ನೆನಪಿಗಾಗಿ ಅಯೋಧ್ಯೆಯಲ್ಲಿ ರಸ್ತೆ ನಿರ್ಮಿಸುವುದಾಗಿ ಮೌರ್ಯ ಘೋಷಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಅಯೋಧ್ಯೆಯ ರಾಮ ಮಂದಿರಕ್ಕಾಗಿ ಆಂದೋಲನ ನಡೆಸಿ ವೇಳೆ ಪ್ರಾಣ ತ್ಯಾಗ ಮಾಡಿದ ಕೊಠಾರಿ ಸಹೋದರರ ತ್ಯಾಗವನ್ನು ಬಿಜೆಪಿ ನಾಯಕರು ನೆನಪು ಮಾಡಿಕೊಳ್ಳುತ್ತಿದ್ದರು.
ರಾಜ್ಯದಲ್ಲಿ ಬಿಜೆಪಿ ನಾಯಕರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೊಠಾರಿ ಸಹೋದರರ ಸಹೋದರಿ ಪೂರ್ಣಿಮಾ ಕೊಠಾರಿ ಭಾಗವಹಿಸಿದ್ದರು ಮತ್ತು ರಾಮ ಮಂದಿರ ನಿರ್ಮಾಣಕ್ಕಾಗಿ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಕಳೆದ ವರ್ಷ ರಾಮ ಮಂದಿರದ ಭೂಮಿ ಪೂಜೆಯ ಸಂದರ್ಭದಲ್ಲಿ ಈ ಇಬ್ಬರು ಕರ ಸೇವಕರ ಕುಟುಂಬ ಸದಸ್ಯರನ್ನು ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನಿಸಲಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.