ನವದೆಹಲಿ: ಕೇಂದ್ರ ಸರ್ಕಾರದ ಪ್ರಮುಖ ಕಾರ್ಯಕ್ರಮವಾದ ಪ್ರಧಾನ್ ಮಂತ್ರಿ ಆವಾಸ್ ಯೋಜನೆ – ಗ್ರಾಮೀಣ (ಪಿಎಂಎವೈ-ಜಿ) ತನ್ನ 1 ನೇ ಹಂತದಲ್ಲಿ ಶೇಕಡಾ 92 ರಷ್ಟು ಗುರಿಯನ್ನು ಸಾಧಿಸಿದೆ ಎಂದು ಹೇಳಿಕೆ ಮಂಗಳವಾರ ತಿಳಿಸಿದೆ.
ಶಾಶ್ವತ ಕಾಯುವಿಕೆ ಪಟ್ಟಿಯಲ್ಲಿ (ಪಿಡಬ್ಲ್ಯುಎಲ್)ನ ಎಲ್ಲಾ ಮನೆಗಳು ಅಮೃತ ಮಹತ್ಸೋವ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿವೆ ಎಂದು ಸರ್ಕಾರ ವಿಶ್ವಾಸ ಹೊಂದಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವಾಲಯದ ಹೇಳಿಕೆ ತಿಳಿಸಿದೆ.
2011 ರ ಎಸ್ಇಸಿಸಿ ಡೇಟಾಬೇಸ್ ಬಳಸಿ ಗುರುತಿಸಲಾಗಿರುವ ಅಸ್ತಿತ್ವದಲ್ಲಿರುವ ಶಾಶ್ವತ ಕಾಯುವಿಕೆ ಪಟ್ಟಿ (ಪಿಡಬ್ಲ್ಯೂಎಲ್)ಯ ಪೈಕಿ, ಈ ದಿನಾಂಕದಂತೆ 2.14 ಕೋಟಿ ಫಲಾನುಭವಿಗಳು ಅರ್ಹರು ಎಂದು ಕಂಡುಬಂದಿದೆ.
ಈ ಪಟ್ಟಿಯು ಆರಂಭದಲ್ಲಿ 2.95 ಕೋಟಿ ಕುಟುಂಬಗಳನ್ನು ಒಳಗೊಂಡಿದ್ದರೂ, ಮಂಜೂರಾತಿ ಸಮಯದಲ್ಲಿ ಸೇರಿದಂತೆ ಮಲ್ಟಿಸ್ಟೇಜ್ ಪರಿಶೀಲನೆಯ ಮೂಲಕ, ಇನ್ನೂ ಅನೇಕ ಮನೆಗಳು ಅನರ್ಹವೆಂದು ಕಂಡುಬಂದಿದೆ, ಆದ್ದರಿಂದ, ಈ ಪಟ್ಟಿಯನ್ನು 2.14 ಕೋಟಿಗೆ ಇಳಿಸಲಾಗಿದೆ ಮತ್ತು ಮತ್ತಷ್ಟು ಇಳಿಯುವ ಸಾಧ್ಯತೆಯಿದೆ ಎಂದು ಸಚಿವಾಲಯ ತಿಳಿಸಿದೆ.
ಇದರ ವಿರುದ್ಧ, 1.92 ಕೋಟಿ (ಶೇಕಡಾ 90) ಮನೆಗಳನ್ನು ಮಂಜೂರು ಮಾಡಲಾಗಿದೆ ಮತ್ತು ಮಂಜೂರಾದ ಮನೆಗಳ ಪೈಕಿ 1.36 ಕೋಟಿ (ಶೇಕಡಾ 71) ಮನೆಗಳು ಪೂರ್ಣಗೊಂಡಿವೆ.
ಯೋಜನೆಯ 1 ನೇ ಹಂತದಲ್ಲಿ ಅಂದರೆ 2016-17 ರಿಂದ 2018-19ರವರೆಗೆ ಒಂದು ಕೋಟಿ ಮನೆಗಳ ಪೂರ್ಣಗೊಳಿಸುವ ಗುರಿಯನ್ನು ನಿಗದಿಪಡಿಸಲಾಗಿದೆ, ಇದರ ಪೈಕಿ ಈಗಾಗಲೇ ಶೇಕಡಾ 92 ರಷ್ಟು ಪೂರ್ಣಗೊಳಿಸುವ ಗುರಿಯನ್ನು ಸಾಧಿಸಲಾಗಿದೆ.
ಎಫ್ವೈ 20-21ರಲ್ಲಿ ಒಟ್ಟು 19,269 ಕೋಟಿ ರೂ.ಗಳನ್ನು ಬಜೆಟ್ ಬೆಂಬಲವಾಗಿ ಲಭ್ಯಗೊಳಿಸಲಾಗಿದ್ದು, ಹೆಚ್ಚುವರಿಯಾಗಿ, 20,000 ಕೋಟಿ ರೂ.ಗಳ ಹೆಚ್ಚುವರಿ ಬಜೆಟ್ ಬೆಂಬಲವನ್ನು ಒದಗಿಸಲಾಗಿದೆ, ಒಟ್ಟಾರೆ 39,269 ಕೋಟಿ ರೂ.ಗಳು ಬಿಡುಗಡೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.