ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಪ್ರದೇಶದ ಯುವಕರು ಮೋದಿ ಸರ್ಕಾರದ ಅಭಿವೃದ್ಧಿ ಉಪಕ್ರಮಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಮತ್ತು ಹೊಸ ಭಾರತದ ಪ್ರಗತಿ ಮತ್ತು ಸಮೃದ್ಧಿಯ ಭಾಗವಾಗಬೇಕೆಂಬ ಇಚ್ಛೆಯನ್ನು ತೋರಿಸಿದ್ದಾರೆ ಎಂದು ಸೌದಿ ಪತ್ರಿಕೆ ಸೌದಿ ಗೆಜೆಟ್ ವರದಿ ಮಾಡಿದೆ.
1978 ರಲ್ಲಿ ಸ್ಥಾಪನೆಯಾದ ಸೌದಿ ಗೆಜೆಟ್, ಅರಬ್ ಸಾಮ್ರಾಜ್ಯದ ಪ್ರಮುಖ ಇಂಗ್ಲಿಷ್ ಪತ್ರಿಕೆಗಳಲ್ಲಿ ಒಂದಾಗಿದೆ. “ದಿ ಟೋನ್ ಆಫ್ ಟ್ರುತ್ ಆಂಡ್ ಮಾಡರೇಶನ್” ಎಂಬ ಥೀಮ್ನೊಂದಿಗೆ ಇದು ಸೌದಿ ಮಾಧ್ಯಮ ಉದ್ಯಮದಲ್ಲಿ ಒಂದು ಮಹತ್ವದ ಸ್ಥಾನವನ್ನು ರಚಿಸಿಕೊಂಡಿದೆ.
370 ನೇ ವಿಧಿಯನ್ನು ರದ್ದುಪಡಿಸಿದ ನಂತರ ಭಾರತ ಸರ್ಕಾರವು ಈ ಪ್ರದೇಶವನ್ನು ಅಭಿವೃದ್ಧಿಪಡಿಸುವ ಭಾಗವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವಾರು ಉಪಕ್ರಮಗಳು ಮತ್ತು ಕಾರ್ಯಕ್ರಮಗಳನ್ನು ಅನಾವರಣಗೊಳಿಸಿದೆ ಎಂದು ಸೌದಿ ಪತ್ರಿಕೆ ಹೇಳಿದೆ.
ಈ ಪ್ರದೇಶದ ಯುವಕರು ಈ ಅಭಿವೃದ್ಧಿ ಉಪಕ್ರಮಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಮತ್ತು ಹೊಸ ಭಾರತದ ಪ್ರಗತಿ ಮತ್ತು ಸಮೃದ್ಧಿಯ ಭಾಗವಾಗಬೇಕೆಂಬ ಬಯಕೆಯನ್ನು ತೋರಿಸಿದ್ದಾರೆ. ಆಗಸ್ಟ್ 5, 2019 ರ ನಂತರ ಶಸ್ತ್ರಾಸ್ತ್ರ ತ್ಯಜಿಸಿದ ಸ್ಥಳೀಯ ಉಗ್ರರಿಗೂ ಪುನರ್ವಸತಿ ನೀಡಲಾಗಿದೆ ಮತ್ತು ರಾಷ್ಟ್ರೀಯ ಮುಖ್ಯವಾಹಿನಿಯ ಭಾಗವಾಗುವಂತೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ.
“ಜಮ್ಮು-ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಂಡರೆ ತ್ರಿವರ್ಣವನ್ನು ಹಿಡಿಯಲು ಕಾಶ್ಮೀರದಲ್ಲಿ ಯಾರಿಗೂ ಬಿಡುವುದಿಲ್ಲ” ಎಂದು ಹೇಳುತ್ತಿದ್ದ ಕಾಶ್ಮೀರದ ಸ್ಥಳೀಯ ನಾಯಕರಲ್ಲಿ ಹೆಚ್ಚಿನವರಿಗೆ ಈಗ ತಮ್ಮ ನಿಲುವು ತಪ್ಪೆಂದು ತಿಳಿದಿದೆ. ಗುಲ್ಮಾರ್ಗ್ಗೆ ಯಾರಾದರು ಭೇಟಿ ನೀಡಿದರೆ ಕಾಶ್ಮೀರಿ ಯುವಕರು ಎಷ್ಟು ಬದಲಾಗಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಬಹುದು, ತ್ರಿವರ್ಣ ಧ್ವಜವನ್ನು ಅವರು ತಮ್ಮ ಹೃದಯಕ್ಕೆ ಹತ್ತಿರ ಇಟ್ಟುಕೊಂಡಿದ್ದಾರೆ “ಎಂದು ಅದು ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.