News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಯೋಗಿ ದಾಖಲೆ: ಸಂಕಷ್ಟದಲ್ಲಿರುವವರಿಗೆ ಅತೀ ಹೆಚ್ಚು ನೆರವು ನೀಡಿದ ನಂ.1 ಸಿಎಂ

ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ರಾಜ್ಯದ ಹಿಂದಿನ ಇತರ ಸರ್ಕಾರಗಳಿಗೆ ಹೋಲಿಸಿದರೆ ಬಡ ಮತ್ತು ನಿರ್ಗತಿಕರಿಗೆ ಸಹಾಯ ಮಾಡುವಲ್ಲಿ ನಂಬರ್‌ 1 ಸ್ಥಾನ ಪಡೆದುಕೊಂಡಿದ್ದಾರೆ.

ಮುಖ್ಯಮಂತ್ರಿಗಳ ವಿವೇಚನಾ ನಿಧಿಯ ಮೂಲಕ ಅವರು ಬಡವರು, ತುಳಿತಕ್ಕೊಳಗಾದವರು ಮತ್ತು ಗಂಭೀರ ಅನಾರೋಗ್ಯದಿಂದ ಬಳಲುತ್ತಿರುವ ರೋಗಿಗಳಿಗೆ ಸಾಕಷ್ಟು ನೆರವು ನೀಡಿದ್ದಾರೆ. ಹಿಂದಿನಿ ಸಿಎಂಗಳಿಗೆ ಹೋಲಿಸಿದರೆ ಅವರ ನೀಡಿದ ನೆರವಿನ ಪ್ರಮಾಣ ಹೆಚ್ಚಾಗಿದೆ.

ಈ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದು ಅವರು ತಮ್ಮ ನಾಲ್ಕು ವರ್ಷಗಳ ಅಧಿಕಾರಾವಧಿಯಲ್ಲಿ ಸುಮಾರು 1000 ಕೋಟಿ ರೂಪಾಯಿಗಳನ್ನು ಬಡ ಜನರಿಗೆ ಮತ್ತು  ಗಂಭೀರ ಅನಾರೋಗ್ಯದಿಂದ ಬಳಲುತ್ತಿರುವ ರೋಗಿಗಳಿಗೆ ನೀಡಿದ್ದಾರೆ ಎಂದು ಶುಕ್ರವಾರ ರಾಜ್ಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಮಾಜವಾದಿ ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಸುಮಾರು 42,508 ಜನರಿಗೆ ನೀಡಿದ್ದು ಕೇವಲ 552 ಕೋಟಿ ರೂ. ಇದಲ್ಲದೆ, ಬಿಎಸ್‌ಪಿ ಸರ್ಕಾರದಲ್ಲಿ ಅಂಕಿಅಂಶಗಳು ಇನ್ನೂ ಕಡಿಮೆಯಾಗಿವೆ. 18,462 ಜನರಿಗೆ ಕೇವಲ 84 ಕೋಟಿ ರೂ ನೀಡಲಾಗಿದೆ.

ಸಿಎಂ ಯೋಗಿ ಸಮಾಜದ ತುಳಿತಕ್ಕೊಳಗಾದವರಿಗೆ ಸಾಕಷ್ಟು ಸಹಾಯ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ, ಹಣದ ಕೊರತೆಯಿಂದ ಬದುಕುಳಿಯುವ ಭರವಸೆಯನ್ನು ಕಳೆದುಕೊಂಡಿದ್ದ ರಾಜ್ಯದ ಅತಿ ಹೆಚ್ಚು ಜನರಿಗೆ ಸಿಎಂ ಸಹಾಯ ಮಾಡಿದ್ದಾರೆ. ಸಿಎಂ ಯೋಗಿಯ ಪ್ರಯತ್ನಗಳಿಂದ ಸಾವಿರಾರು ಜನರು ತಮ್ಮ ಜೀವಗಳನ್ನು ರಕ್ಷಿಸಿಕೊಂಡಿದ್ದಾರೆ.

ಸಿಎಂ ಯೋಗಿ ಅವರು 2017-18ರ ಆರ್ಥಿಕ ವರ್ಷದಲ್ಲಿ ಮುಖ್ಯಮಂತ್ರಿಯವರ ವಿವೇಚನಾ ನಿಧಿಯಿಂದ ಸುಮಾರು 13,224 ಜನರಿಗೆ ರೂ .1,84,42,88,750 ಮತ್ತು  2018-19ರ ಆರ್ಥಿಕ ವರ್ಷದಲ್ಲಿ 2,56,34,61,400 ರೂ ಅನ್ನು 17, 772 ಜನರಿಗೆ ನೀಡಿದ್ದಾರೆ. 2019-20ರ ಆರ್ಥಿಕ ವರ್ಷದಲ್ಲಿ 18,014 ಜನರಿಗೆ 2,80,23,56,695 ರೂ ಮತ್ತು 2020-21ರ ಆರ್ಥಿಕ ವರ್ಷದಲ್ಲಿ 15,343 ಜನರಿಗೆ 2,75,71,75,036 ರೂ ನೀಡಿದ್ದಾರೆ.  ನಾಲ್ಕು ವರ್ಷಗಳ ಅಧಿಕಾರಾವಧಿಯಲ್ಲಿ 64,353 ಜನರಿಗೆ ಒಟ್ಟು 996 ಕೋಟಿ ರೂ.ಅವರು ನೀಡಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top