ನವದೆಹಲಿ: ಹಿಂದೂ ಧಾರ್ಮಿಕ ಗ್ರಂಥಗಳು ಮತ್ತು ಪುರಾಣಗಳನ್ನು ಕೇಂದ್ರೀಕರಿಸುವ ಮತ್ತು ಪಠ್ಯಗಳಲ್ಲಿ ಭಾರತದಲ್ಲಿನ ಮೊಘಲ್ ಆಳ್ವಿಕೆಯ ನಿರೂಪಣೆ ಮತ್ತು ಪ್ರಭಾವವನ್ನು ಕಡಿಮೆ ಮಾಡುವ ಪದವಿ ವಿದ್ಯಾರ್ಥಿಗಳ ಕರಡು ಇತಿಹಾಸ ಪಠ್ಯಕ್ರಮವನ್ನು ಯೂನಿವರ್ಸಿಟಿ ಗ್ರಾಂಟ್ ಕಮಿಷನ್ ಆಫ್ ಇಂಡಿಯಾ (ಯುಜಿಸಿ) ಕ್ರೋಢಿಕರಿಸುತ್ತಿದೆ.
ಹಿಂದೆಲ್ಲಾ ಸಾಮಾನ್ಯ ಮಾರ್ಗಸೂಚಿಗಳನ್ನು ನೀಡುವುದಕ್ಕೆ ಹೋಲಿಸಿದರೆ, ಭಾರತದ ಉನ್ನತ ಶಿಕ್ಷಣ ನಿಯಂತ್ರಣ ಸಂಸ್ಥೆಯಾದ ಯುಜಿಸಿ ಸಂಪೂರ್ಣ ಪಠ್ಯಕ್ರಮವನ್ನು ರಚಿಸಿದ್ದು ಇದೇ ಮೊದಲು. “ಮಧ್ಯಕಾಲೀನ ಅವಧಿಯ ಗಂಭೀರ ಪುನರ್ ರಚನೆಯನ್ನು ಮಾಡಲಾಗಿದೆ, ಅದು ರಾಷ್ಟ್ರದ ಇತಿಹಾಸದ ಉತ್ತಮ ತಿಳುವಳಿಕೆಗಾಗಿ ಭಾರತದ ದೊಡ್ಡ ಭಾಗವನ್ನು ಒಳಗೊಳ್ಳುತ್ತದೆ” ಎಂದು ಆಯೋಗವು ಪ್ರಸ್ತಾವಿತ ಕರಡಿನ ಮುನ್ನುಡಿಯಲ್ಲಿ ಉಲ್ಲೇಖಿಸಿದೆ.
ಖಾಸಗಿ ಮತ್ತು ಸಾರ್ವಜನಿಕ ವಿಶ್ವವಿದ್ಯಾಲಯಗಳಲ್ಲಿ ಕಲಿಸಲಾಗುವ ಬ್ಯಾಚುಲರ್ ಆಫ್ ಆರ್ಟ್ಸ್ (ಹಿಸ್ಟರಿ) ಪದವಿಯಲ್ಲಿನ ಪಠ್ಯಕ್ರಮದಲ್ಲಿನ ಬದಲಾವಣೆಗಳು, ಪ್ರಸ್ತುತ ಆಡಳಿತ ಪಕ್ಷವಾದ ಬಿಜೆಪಿಯ ಇತಿಹಾಸ ಶಿಕ್ಷಣವನ್ನು ಸಾಧನವಾಗಿ ಬಳಸುವ ಹಿಂದಿನ ಹಲವಾರು ಪ್ರಯತ್ನಗಳನ್ನು ನೆನಪಿಸುತ್ತದೆ. ಭಾರತದ ಗತಕಾಲದ ಬಗ್ಗೆ, ಹಿಂದೂ ಧಾರ್ಮಿಕ ವಿಚಾರಗಳ ಬಗ್ಗೆ ಈ ಪಠ್ಯಗಳು ಮರು ನೆನಪಿಸುತ್ತದೆ.
ಈ ಪಠ್ಯಕ್ರಮವು ಮಾರ್ಗದರ್ಶಕ ಅಂಶವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಆಯೋಗವು ಹೇಳುತ್ತದೆ.
ಪಠ್ಯಕ್ರಮದಲ್ಲಿನ ಪ್ರಮುಖ ಬದಲಾವಣೆಗಳು ಹಿಂದೂ ಧರ್ಮದ ಸುತ್ತಲಿನ ಧಾರ್ಮಿಕ ಗ್ರಂಥಗಳ ಮೇಲೆ ಹೆಚ್ಚಿನ ಗಮನವನ್ನು ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.