ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಇ-ಸಂಜೀವಿನಿ ಟೆಲಿಮೆಡಿಸಿನ್ ಸೇವೆಗೆ ಕರ್ನಾಟಕದಲ್ಲಿ ಉತ್ತಮ ಸ್ಪಂದನೆ ದೊರೆತಿದೆ. ಈ ಸೇವೆಯ ಮೂಲಕ ಈ ಮಾರ್ಚ್ 15, 2021 ರ ವರೆಗೆ ಈ ಸೇವೆಯ ಮೂಲಕ ರಾಜ್ಯದ ಸುಮಾರು 6 ಲಕ್ಷ ಜನರು ಉಚಿತವಾಗಿ ಆರೋಗ್ಯ ಸಮಾಲೋಚನೆ ನಡೆಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಳೆದ ಬಾರಿಯಿಂದ ವಿಶ್ವಕ್ಕೆ ಉಂಟಾಗಿರುವ ಹೊಸ ಸಮಸ್ಯೆ ಕೊರೋನಾ ಕಾರಣಕ್ಕಾಗಿ, ಜನರಿಗೆ ಆರೋಗ್ಯ ಸಂಬಂಧಿ ಸಲಹೆಗಳನ್ನು ಪಡೆದುಕೊಳ್ಳುವುದಕ್ಕೆ ಅನುಕೂಲವಾಗುವಂತೆ ಕಳೆದ ಡಿಸೆಂಬರ್ ತಿಂಗಳಿನಲ್ಲಿ ಈ ಸೇವೆಯನ್ನು ಆರಂಭ ಮಾಡಲಾಗಿತ್ತು. ಈ ಸೇವೆಯಡಿಯಲ್ಲಿ ಮಾರ್ಚ್ 15 ರ ವರೆಗೆ ಮನೆಯಲ್ಲಿಯೇ ಕುಳಿತು 6 ಲಕ್ಷಕ್ಕೂ ಅಧಿಕ ಜನರು ಆರೋಗ್ಯ ಸಂಬಂಧಿ ಸಲಹೆಗಳನ್ನು ಪಡೆದುಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.
ಟೆಲಿಮೆಡಿಸಿನ್ ಸೇವೆಯನ್ನು ಎರಡು ವಿಧದಲ್ಲಿ ಕಾರ್ಯರೂಪಕ್ಕೆ ತರಲಾಗಿದ್ದು, ಒಂದು ವೈದ್ಯರಿಂದ ವೈದ್ಯರಿಗೆ ಇ-ಸಂಜೀವಿನಿ ಮತ್ತು ರೋಗಿಗಳಿಂದ ವೈದ್ಯರಿಗೆ ಇ-ಸಂಜೀವಿನಿ ಒಪಿಡಿ ವಿಧದಲ್ಲಿ ಲಭ್ಯವಿದೆ. ಈ ಯೋಜನೆಯು ರಾಷ್ಟ್ರೀಯ ಆರೋಗ್ಯ ಸಂಪರ್ಕ ಸೇತುವಿನಂತೆ ಕಾರ್ಯನಿರ್ವಹಿಸುತ್ತಿದ್ದು, ಸಾನಿಕರು ತಾವಿದ್ದಲ್ಲಿಂದಲೇ ಮೊಬೈಲ್ ಮೂಲಕ ವೈದ್ಯರನ್ನು ಸಂಪರ್ಕಿಸಿ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡುಕೊಳ್ಳುವಂತೆ ರೂಪಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.