ಚಾಮರಾಜನಗರ: ಪ್ರಧಾನಿ ನರೇಂದ್ರ ಮೋದಿ ಭಾರತ ಆತ್ಮನಿರ್ಭರತೆ ಸಾಧಿಸುವ ನಿಟ್ಟಿನಲ್ಲಿ ಹಲವು ಕ್ಷೇತ್ರಗಳಿಗೆ ಪ್ರೇರೇಪಣೆ, ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದಾರೆ. ಅಂತಹವುಗಳಲ್ಲಿ ಆಟಿಕೆ ಕ್ಷೇತ್ರವೂ ಒಂದು. ರಾಜ್ಯದ ಚನ್ನಪಟ್ಟಣದ ಗೊಂಬೆಗಳಿಗೂ ಈ ಹಿನ್ನೆಲೆಯಲ್ಲಿ ವಿಶೇಷ ಮಹತ್ವ ನೀಡಿದ್ದರು.ಈ ಪ್ರೇರಣೆಯೊಂದಿಗೆ ಹೆಜ್ಜೆ ಹಾಕಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿರುವುದಾಗಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವಥ್ ನಾರಾಯಣ ತಿಳಿಸಿದ್ದಾರೆ.
ಚನ್ನಪಟ್ಟಣದ ಗೊಂಬೆಗಳನ್ನು ಮನೆಯಲ್ಲಿ ಅಲಂಕಾರಕ್ಕಾಗಿ ಉಪಯೋಗಿಸುವುದರ ಜೊತೆಗೆ ಮಕ್ಕಳ ಆಟಿಕೆಗಳಾಗಿ ಬಳಕೆ ಮಾಡಲಾಗುತ್ತದೆ. ಆಟಿಕೆಗಳಿಗೆ ಂಬಂಧಿಸಿದಂತೆ ಚನ್ನಪಟ್ಟಣದ ಗೊಂಬೆಗಳಿಗೆ ತಮ್ಮದೇ ಆದ ಮಹತ್ವವಿದೆ. ಪ್ರಖ್ಯಾತಿ ಇದೆ. ಇದೀಗ ಅಶ್ವತ್ಥ ನಾರಾಯಣ್ ಅವರು ಈ ಆಟಿಕೆಗಳನ್ನು ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ತೀರಾ ಹಿಂದುಳಿದ ಹಾಡಿಗಳ ಅಂಗನವಾಡಿಗಳನ್ನು ಆಯ್ಕೆ ಮಾಡಿಕೊಂಡು ಚನ್ನಪಟ್ಟಣದ ಆಟಿಕೆಗಳನ್ನು ಅಲ್ಲಿನ ಮಕ್ಕಳಿಗೆ ನೀಡಲು ಮುಂದಾಗಿದ್ದಾರೆ.
ಹಾಡಿಯ ಮಕ್ಕಳಿಗೆ ಚನ್ನಪಟ್ಟಣ ಗೊಂಬೆಗಳನ್ನು ನೀಡುವ ಸಲುವಾಗಿ ಡಿಸಿಎಂ ಕ್ರಮ ಕೈಗೊಂಡಿದ್ದು, ರಾಮನಗರ ಜಿಲ್ಲೆಯ ಚನ್ನಪಟ್ಟಣದ ಕ್ರಾಫ್ಟ್ ವರ್ಕ್ಸ್ ಮಳಿಗೆಯಿಂದ ಹಲವು ಬಗೆಯ ಚನ್ನಪಟ್ಟಣ ಆಟಿಕೆಗಳನ್ನು ಖರೀದಿಸಿ ಸೋಲಿಗರ ಹಾಡಿಗಳ ಶಿಶುವಿಹಾರ ಚಿಣ್ಣರಿಗೆ ನೀಡುವುದಾಗಿಯೂ ಹೇಳಿಕೆ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.