ನವದೆಹಲಿ: ರಾಷ್ಟ್ರೀಯ ಪ್ರಾಣಿ ಹುಲಿಯನ್ನು ಸಂರಕ್ಷಿಸಲು ದೇಶದಲ್ಲಿ ಸತತ ಪ್ರಯತ್ನಗಳನ್ನು ಮಾಡಲಾಗುತ್ತಿದೆ, ಸರ್ಕಾರಗಳೂ ಇದಕ್ಕಾಗಿ ಅಭಿಯಾನಗಳನ್ನು ಆರಂಭಿಸಿದೆ. ಇವೆಲ್ಲವುದರ ನಡುವೆಯೂ ಕಳೆದ 7 ತಿಂಗಳುಗಳಲ್ಲಿ 41 ಹುಲಿಗಳನ್ನು ನಾವು ಕಳೆದುಕೊಂಡಿದ್ದೇವೆ.
ಸ್ವಾಭಾವಿಕವಾಗಿ ಈ ಹುಲಿಗಳು ಸತ್ತಿದ್ದರೆ ಅದಕ್ಕಷ್ಟು ತಲೆಗೆಡಿಸಿಕೊಳ್ಳಬೇಕಾಗಿರಲಿಲ್ಲ, ಆದರೆ ಹುಲಿಗಳು ಮಾನವರಿಂದ ಕೊಲ್ಲಲ್ಪಡುತ್ತಿವೆ. ಮಾನವ-ಹುಲಿಯ ಸಂಘರ್ಷದಲ್ಲಿ ಹುಲಿಗಳನ್ನು ಅಧಿಕಾರಿಗಳೇ ಕೊಲ್ಲುತ್ತಿದ್ದಾರೆ. ಹುಲಿಗಳ ಬೇಟೆಯಾಡಲಾಗುತ್ತಿದೆ, ಬಲೆಯಿಡಲಾಗುತ್ತಿದೆ, ಹಳ್ಳಿಗರು ವಿಷವುಣಿಸಿ ಸಾಯಿಸುತ್ತಿದ್ದಾರೆ.
ಮಾನವನ ಈ ಕುಕೃತ್ಯದಿಂದಾಗಿ ದೇಶದಲ್ಲಿ ಕಳೆದ 7ತಿಂಗಳಲ್ಲಿ 41 ಹುಲಿಗಳು ಸತ್ತಿವೆ ಎಂಬ ಆಘಾತಕಾರಿ ವರದಿಯನ್ನು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಮತ್ತು ಟಿಆರ್ಎಎಫ್ಎಫ್ಐಸಿ-ಇಂಡಿಯಾ, ದಿ ವೈಲ್ಡ್ಲೈಫ್ ಟ್ರೇಡ್ ಮಾನಿಟರಿಂಗ್ ನೆಟ್ವರ್ಕ್ ಜಂಟಿಯಾಗಿ ನೀಡಿದೆ.
ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಹುಲಿಗಳು ಸಾಯುತ್ತಿವೆ ಎಂದು ವರದಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.