ನವದೆಹಲಿ: ಇತ್ತೀಚಿನ ಬೆಳವಣಿಗೆಯೊಂದರಲ್ಲಿ, ಕನಿಷ್ಠ 11 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ ವಾಸಿಸುವ ಆಯುಷ್ಮಾನ್ ಭಾರತ್-ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜನೆ (ಎಬಿ-ಪಿಎಂಜೆಎ) ಫಲಾನುಭವಿಗಳು ಯುಟಿಐ ಇನ್ಫ್ರಾಸ್ಟ್ರಕ್ಚರ್ ಟೆಕ್ನಾಲಜಿ ಅಂಡ್ ಸರ್ವೀಸಸ್ ಲಿಮಿಟೆಡ್ (ಯುಟಿಐಐಟಿಎಸ್ಎಲ್) ಮೂಲಕ ಉಚಿತ ಪಿವಿಸಿ ಆಯುಷ್ಮಾನ್ ಕಾರ್ಡ್ಗಳನ್ನು ಪಡೆಯಬಹುದು.
ಇದಕ್ಕಾಗಿ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರವು ಯುಟಿಐ ಇನ್ಫ್ರಾಸ್ಟ್ರಕ್ಚರ್ ಟೆಕ್ನಾಲಜಿ ಅಂಡ್ ಸರ್ವೀಸಸ್ ಲಿಮಿಟೆಡ್ (ಯುಟಿಐಐಟಿಎಸ್ಎಲ್) ನೊಂದಿಗೆ ಅರ್ಹವಾದ ಫಲಾನುಭವಿಗಳಿಗೆ ಉಚಿತ ಪಿವಿಸಿ ಕಾರ್ಡ್ ಆಯುಷ್ಮಾನ್ ಕಾರ್ಡ್ಗಳನ್ನು ನೀಡಲು ಒಪ್ಪಂದಕ್ಕೆ ಸಹಿ ಹಾಕಿದೆ.
“ಪಿವಿಸಿ ಆಯುಷ್ಮಾನ್ ಕಾರ್ಡ್ಗಳು ಉತ್ತಮ ಗುಣಮಟ್ಟದ, ಸುರಕ್ಷಿತ, ಬಾಳಿಕೆ ಬರುವ, ನಿರ್ವಹಿಸಲು ಸುಲಭವಾಗಿದ್ದು, ಇದು ಫಲಾನುಭವಿಗಳಿಗೆ ಉಚಿತವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ, ಪಿವಿಸಿ ಆಯುಷ್ಮಾನ್ ಕಾರ್ಡ್ಗಳನ್ನು ಉತ್ಪಾದಿಸಲು ಆರೋಗ್ಯ ಪ್ರಾಧಿಕಾರ ಸಾಮಾನ್ಯ ಸೇವಾ ಕೇಂದ್ರಗಳೊಂದಿಗೆ (ಸಿವಿಸಿ) ಸಹಿ ಹಾಕಿದೆ “ಎಂದು ಆಯುಷ್ಮಾನ್ ಭಾರತ್- ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜನೆ (ಎಬಿ-ಪಿಎಂಜೆಎ) ಸಿಇಒ ಡಾ.ರಾಮ್ ಸೇವಕ್ ಶರ್ಮಾ ಹೇಳಿದ್ದಾರೆ.
“ಯುಟಿಐ ಇನ್ಫ್ರಾಸ್ಟ್ರಕ್ಚರ್ ಟೆಕ್ನಾಲಜಿ ಅಂಡ್ ಸರ್ವೀಸಸ್ ಲಿಮಿಟೆಡ್ (ಯುಟಿಐಐಟಿಎಸ್ಎಲ್) ನೊಂದಿಗಿನ ಆರೋಗ್ಯ ಪ್ರಾಧಿಕಾರದ ಒಪ್ಪಂದವು ಎಲ್ಲಾ ಎಬಿ-ಪಿಎಂಜೆಎ ಫಲಾನುಭವಿಗಳನ್ನು ತಲುಪುವ ಗುರಿಯನ್ನು ಹೊಂದಿದೆ, ಇದರಿಂದಾಗಿ ಅವರು ಯಾವುದೇ ತೊಂದರೆಗಳಿಲ್ಲದೆ ಯೋಜನೆಯಡಿಯಲ್ಲಿ ಆರೋಗ್ಯ ಸೌಲಭ್ಯಗಳನ್ನು ಪಡೆಯಬಹುದು” ಎಂದು ಅವರು ಹೇಳಿದರು.
ಆಯುಷ್ಮಾನ್ ಭಾರತ್ ಯೋಜನೆ ಪ್ರಸ್ತುತ ಬಿಹಾರ, ಮಣಿಪುರ, ಉತ್ತರ ಪ್ರದೇಶ, ಹರಿಯಾಣ, ತ್ರಿಪುರ, ನಾಗಾಲ್ಯಾಂಡ್, ಚಂಡೀಗಢ, ಪುದುಚೇರಿ, ಛತ್ತೀಸ್ಗಢ, ಮಧ್ಯಪ್ರದೇಶ ಮತ್ತು ಉತ್ತರಾಖಂಡದಲ್ಲಿ ಜಾರಿಯಲ್ಲಿದೆ.
ಇಲ್ಲಿಯವರೆಗೆ, ಫಲಾನುಭವಿಗಳು ಯುಟಿಐಐಟಿಎಸ್ಎಲ್ನಲ್ಲಿ ಶುಲ್ಕವಾಗಿ 30 ರೂ.ಪಾವತಿಸಬೇಕಿತ್ತು. ಆರೋಗ್ಯ ಪ್ರಾಧಿಕಾರ ಮತ್ತು ಯುಟಿಐಐಟಿಎಸ್ಎಲ್ ನಡುವಣ ಒಪ್ಪಂದದ ಅಡಿ, ಈ 11 ರಾಜ್ಯಗಳು / ಯುಟಿಗಳು ಎಲ್ಲಾ ಅರ್ಹ ಫಲಾನುಭವಿಗಳಿಗೆ ಉಚಿತವಾಗಿ ಹೊಸ ಪಿವಿಸಿ ಆಯುಷ್ಮಾನ್ ಕಾರ್ಡ್ಗಳನ್ನು ಉಚಿತವಾಗಿ ನೀಡುತ್ತವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.