ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮಹಾತ್ಮ ಗಾಂಧಿಯವರ ಐತಿಹಾಸಿಕ ದಂಡಿ ಯಾತ್ರೆಯ ಮರುಸೃಷ್ಟಿಗೆ ಅಹಮದಾಬಾದ್ನ ಸಬರಮತಿ ಆಶ್ರಮದಿಂದ ಶುಕ್ರವಾರ ಚಾಲನೆ ನೀಡಲಿದ್ದಾರೆ. ಐತಿಹಾಸಿಕ ದಂಡಿ ಯಾತ್ರೆಯ 386 ಕಿಲೋಮೀಟರ್ ಮೂಲ ಮಾರ್ಗದ ಮೂಲಕ ಸಾಗಿ ಸಬರಮತಿ ಆಶ್ರಮದಿಂದ ದಕ್ಷಿಣ ಗುಜರಾತ್ನ ಸಮುದ್ರ ತೀರದಲ್ಲಿರುವ ದಂಡಿಯನ್ನು ಮೆರವಣಿಗೆದಾರರು ತಲುಪಲಿದ್ದಾರೆ.
ರಾಜ್ಯಮಟ್ಟದ ಉನ್ನತ-ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಈ ಬಗ್ಗೆ ಘೋಷಿಸಿದ್ದು, ಭಾರತದ ಸ್ವಾತಂತ್ರ್ಯದ ಅಮೃತ್ ಮಹೋತ್ಸವವನ್ನು ಭವ್ಯವಾಗಿ ಆಚರಿಸಲಾಗುವುದು ಎಂದಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾರ್ಚ್ 12 ರಂದು ಸಬರಮತಿ ಗಾಂಧಿ ಆಶ್ರಮದಿಂದ ಐತಿಹಾಸಿಕ ದಂಡಿ ಮಾರ್ಚ್ನ ಮರುಸೃಷ್ಟಿಗೆ ಚಾಲನೆ ನೀಡಲಿದ್ದಾರೆ. 81 ಪಾದಚಾರಿಗಳು ಸಬರಮತಿ ಆಶ್ರಮದಿಂದ 386 ಕಿ.ಮೀ ದೂರದಲ್ಲಿರುವ ಕಡಲ ತೀರದಲ್ಲಿ ದಂಡಿಗೆ ಹೋಗಲಿದ್ದಾರೆ. ಮೆರವಣಿಗೆಯಲ್ಲಿ ಇರುವವರು ತಮ್ಮ ದಾರಿ ಮಧ್ಯೆ 21 ಸ್ಥಳಗಳಲ್ಲಿ ನಿಲ್ಲುತ್ತಾರೆ ಮತ್ತು ವಿವಿಧ ಕಾರ್ಯಕ್ರಮಗಳಿಗೆ ಹಾಜರಾಗುತ್ತಾರೆ ಎಂದು ರೂಪಾನಿ ಹೇಳಿದ್ದಾರೆ.
ಸ್ವಚ್ಛತೆ, ಪರಿಸರ, ಭದ್ರತೆ ಮತ್ತು ನೀರಿನ ಸಂರಕ್ಷಣೆ ಕ್ಷೇತ್ರದಲ್ಲಿ ನಡೆಯುತ್ತಿರುವ ಸಾಮಾಜಿಕ-ಆರ್ಥಿಕ ಬದಲಾವಣೆಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳು ಇವುಗಳಲ್ಲಿ ಸೇರಿವೆ. ಇಂದಿನಿಂದ 25 ವರ್ಷಗಳಲ್ಲಿ ಭಾರತ ಸ್ವಾತಂತ್ರ್ಯದ ಶತಮಾನೋತ್ಸವದ ವೇಳೆ ವಿಶ್ವ ಗುರುವಾಗಿ ಭಾರತವನ್ನು ಹೊರಹೊಮ್ಮಿಸುವ ಗುರಿಯೊಂದಿಗೆ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ. ಇವುಗಳಲ್ಲದೆ, ಮಹಾತ್ಮ ಗಾಂಧಿಯವರ ಜೀವನ ಮತ್ತು ಗುಜರಾತ್ನ ಕೊಡುಗೆಗಳಿಗೆ ಸಂಬಂಧಿಸಿದ 75 ಸ್ಥಳಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.