ಬೆಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ವಾರ್ಷಿಕ ಗೌರವ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಾಳೆ ನಡೆಯಲಿದೆ.
ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಾಳೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ 2018 ರಿಂದ 2020 ರ ವರೆಗಿನ ಪ್ರಶಸ್ತಿಗಳ ಪ್ರದಾನ ಸಮಾರಂಭ ನಡೆಯಲಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಅಕಾಡೆಮಿಯ ಮೂಲಗಳು ತಿಳಿಸಿವೆ. ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ. ವಿ. ಸದಾನಂದ ಗೌಡ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
2018 ನೇ ಸಾಲಿನಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು, ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಲಲಿತಾ ಆರ್ ರೈ, ರತ್ನಾಕರ ರಾವ್ ಕಾವೂರು (ನಾಟಕ), ಎ. ಕೆ. ವಿಜಯ್ (ಸಿನೆಮಾ), ಪುಸ್ತಕ ಬಹುಮಾನಕ್ಕೆ ಶಾಂತಾರಾಮ್ ವಿ ಶೆಟ್ಟಿ (ಕಾವ್ಯ), ರಾಜಶ್ರೀ ಟಿ. ರೈ (ಕಾದಂಬರಿ) ಅವರಿಗೆ ಪ್ರದಾನಿಸಲಾಗುತ್ತಿದೆ.
2019 ಕ್ಕೆ ಸಂಬಂಧಿಸಿದಂತೆ ಡಾ ಎಸ್ ಆರ್ ವಿಘ್ನರಾಜ (ಸಾಹಿತ್ಯ), ತಿಮ್ಮಪ್ಪ ಗುಜರನ್ ತಲಕಳ (ಯಕ್ಷಗಾನ), ಗುರುವ ಕೊರಗ ಹಿರಿಯಡ್ಕ (ಜಾನಪದ), ಪುಸ್ತಕ ಬಹುಮಾನ ಕುಶಾಲಾಕ್ಷಿ ಕುಲಾಲ್ (ಕಾವ್ಯ) ಅವರಿಗೆ ನೀಡಲಾಗುತ್ತಿದೆ. 2020 ಕ್ಕೆ ಸಂಬಂಧಿಸಿದಂತೆ ರಾಮಚಂದರ್ ಬೈಕಂಪಾಡಿ ಅವರಿಗೆ ಸಾಹಿತ್ಯಕ್ಕೆ ಸಂಬಂಧಿಸಿದಂತೆ, ತುಂಗಪ್ಪ ಬಂಗೇರ (ನಾಟಕ), ಆನಂದ ಪೂಜಾರಿ (ಜಾನಪದ), ಡಾ ಕೆ ಚಿನ್ನಪ್ಪ ಗೌಡ (ಕವನ) ಅವರನ್ನು ಆಯ್ಕೆ ಮಾಡಲಾಗಿದೆ.
2020 ರ ಯುವ ಸಾಧಕ ಪುರಸ್ಕಾರಕ್ಕೆ ಯೋಗೀಶ್ ಶೆಟ್ಟಿ (ಭಾಷಾ ಸಂಘಟಕ), ನವೀನ್ ಶೆಟ್ಟಿ (ನಿರೂಪಣೆ), ರಮೇಶ್ ಪಿ. ಮೆಟ್ಟಿನಡ್ಕ (ಜಾನಪದ ಕಲಾ ಸಂಘಟನೆ), ನಾಗರಾಜ್ ಭಟ್ (ಆಧ್ಯಾತ್ಮ), ಭರತ್ ಸೌಂದರ್ಯ (ಕಲಾ ಪೋಷಕ), ಸುಭಾಷ್ ನಾಯಕ್ (ಶಾಸನ ಸಂಶೋಧನೆ), ದೀಪಕ್ ಪಡುಕೋಣೆ (ಲಿಪಿ ಪರಿಶೋಧಕ), ವಿಶೇಷ ಬಾಲಪ್ರತಿಭೆಗಳಾದ ತನುಶ್ರೀ ಪಿತ್ರೋಡಿ, ಸನ್ನಿಧಿ ಟಿ ರೈ ಪೆರ್ಲ(ಕಲೆ), ತಕ್ಷಿಲ್ ದೇವಾಡಿಗ (ಜಾನಪದ) ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.