ಬೆಂಗಳೂರು: ನಾನು ಆರ್ಎಸ್ಎಸ್ ಹಿನ್ನೆಲೆಯಿಂದ ಬಂದವನು. ಪ್ರಧಾನಿ ಮೋದಿ ಅವರೂ ಆರ್ಎಸ್ಎಸ್ನವರೇ. ಈ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಕಾಂಗ್ರೆಸ್ಗೆ ತಿರುಗೇಟು ನೀಡಿದ್ದಾರೆ.
ವಿಧಾನಸಭಾ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯರು ಆರ್ಎಸ್ಎಸ್ ವಿರುದ್ಧ ಘೋಷಣೆ ಕೂಗಿದ ಸಂದರ್ಭದಲ್ಲಿ ಯಡಿಯೂರಪ್ಪ ಈ ಪ್ರತಿಕ್ರಿಯೆ ನೀಡಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಟೀಕಿಸಿ ಕಾಂಗ್ರೆಸ್ ಹೀನಾಯ ಪರಿಸ್ಥಿತಿಗೆ ಬಂದು ತಲುಪಿದೆ. ಇಂತಹದ್ದೇ ವರ್ತನೆ ಮುಂದುವರೆಸಿದರೆ ಕಾಂಗ್ರೆಸ್ ನಾಮಾವಶೇಷವಾಗುವುದು ಖಂಡಿತ. ಆರ್ಎಸ್ಎಸ್ ದೇಶದ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಸಂಘಟನೆಯಾಗಿದ್ದು, ನಾವೆಲ್ಲರೂ ಆರ್ಎಸ್ಎಸ್ನವರೇ ಎಂದು ತಿಳಿಸಿದ್ದಾರೆ.
ಆರ್ಎಸ್ಎಸ್ ವಿರುದ್ಧ, ಪ್ರಧಾನಿ ವಿರುದ್ಧ ಅನಗತ್ಯ ಟೀಕೆ ಸಲ್ಲದು. ನರೇಂದ್ರ ಮೋದಿ ಅವರು ಜಾಗತಿಕ ನಾಯಕ ಎಂದು ಜಗತ್ತೇ ಮೆಚ್ಚಿದೆ. ಪ್ರತಿಪಕ್ಷ ನಾಯಕರಾಗಿ ಸಿದ್ದರಾಮಯ್ಯ ಅವರು ಅವರ ಕಾರ್ಯ ನಿರ್ವಹಿಸಲಿ. ಇಲ್ಲಸಲ್ಲದ ಆರೋಪ ಸಮಂಜಸವಲ್ಲ. ಎಂದು ಹೇಳಿದ್ದಾರೆ.
“ಅವರು (ವಿರೋಧ ಪಕ್ಷಗಳು) ಆರ್ಎಸ್ಎಸ್-ಆರ್ಎಸ್ಎಸ್ ಎಂದು ಹೇಳುತ್ತಲೇ ಇರುತ್ತಾರೆ, ಅವರು ಹೇಳಿದಷ್ಟು ಆರ್ಎಸ್ಎಸ್ ಹೆಚ್ಚು ಶಕ್ತಿಶಾಲಿ ಆಗುತ್ತದೆ. ಆರ್ಎಸ್ಎಸ್ ಕಾರಣದಿಂದ ನಾನು ಇಂದು ಇಲ್ಲಿದ್ದೇನೆ. ತಾನು ಆರ್ಎಸ್ಎಸ್ ಹಿನ್ನೆಲೆಯವನು ಎಂದು ಪ್ರಧಾನಿ ಮೋದಿ ಕೂಡ ಹೆಮ್ಮೆಯಿಂದ ಹೇಳುತ್ತಾರೆ. ಕೋವಿಡ್ ನಿರ್ವಹಣೆಗೆ ಪ್ರಧಾನಿಯನ್ನು ವಿಶ್ವವೇ ಕೊಂಡಾಡುತ್ತಿದೆ, ಆದರೆ ವಿರೋಧ ಪಕ್ಷವದರು ಅವರ ಗಡ್ಡದ ಬಗ್ಗೆ ಅಸಂಬದ್ಧವಾಗಿ ಮಾತನಾಡುತ್ತಾರೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.