ಬೆಂಗಳೂರು: ಕ್ಷೇತ್ರದ ಸಂಸದರ ಕ್ಷೇತ್ರಾಭಿವೃದ್ಧಿ ನಿಧಿಯನ್ನು ಸಮರ್ಪಕವಾಗಿ ಬಳಸಿದ ಸಂಸದರ ಪೈಕಿ ರಾಜ್ಯದಲ್ಲಿ ಪ್ರತಾಪ್ ಸಿಂಹ ಮತ್ತ ಸುಮಲತಾ ಅವರು ಅತ್ಯುತ್ತಮ ಎನಿಸಿಕೊಂಡಿದ್ದಾರೆ.
ಕ್ಷೇತ್ರದ ಅಭಿವೃದ್ಧಿಗಾಗಿ ಒಂದು ಸಂಸದನಿಗೆ 5 ಕೋಟಿ ರೂ. ಗಳನ್ನು ಕೇಂದ್ರ ಎರಡು ಕಂತುಗಳ ರೂಪದಲ್ಲಿ ಬಿಡುಗಡೆಗೊಳಿಸುತ್ತದೆ. ಈ ನಿಧಿಯನ್ನು ಸಂಪೂರ್ಣವಾಗಿ ಬಳಸಿದ ರಾಜ್ಯದ ಇಬ್ಬರು ಸಂಸದರಿಗೆ ಮಾತ್ರ ಈವರೆಗೆ 5 ಕೋಟಿ ರೂ. ಗಳು ಬಂದಿವೆ.
ರಾಜ್ಯದಲ್ಲಿನ ಒಟ್ಟು 28 ಸಂಸದರಿಗೆ ಅನುಗುಣವಾಗಿ ಒಟ್ಟು 140 ಕೋಟಿ ಬಿಡುಗಡೆಗೊಳಿಸಬೇಕು. ಆದರೆ ಈ ಮೊದಲ ಕಂತಿನ 75 ಕೋಟಿ ರೂ. ಮಾತ್ರ ಬಿಡುಗಡೆಗೊಂಡಿದೆ. ಈ ಬಗ್ಗೆ ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು ಸಂಸದರ ಪ್ರದೇಶಾಭಿವೃದ್ಧಿ ನಿಧಿ ಬಳಕೆ ಕುರಿತು ತನ್ನ ವೆಬ್ಸೈಟ್ನಲ್ಲಿ ಈ ಮಾಹಿತಿ ನೀಡಿದೆ.
ಸಂಸದರ ಎರಡನೇ ಕಂತು ಕೇಂದ್ರದಿಂದ ಯಾಕೆ ಬಿಡುಗಡೆಯಾಗಿಲ್ಲ ಪ್ರಶ್ನೆಗೆ ಈ ಮೊದಲು ಬಿಡುಗಡೆಯಾದ ಮೊದಲ ಕಂತಿನ ರೂ. 2. 5 ಕೋಟಿಯ ಅಭಿವೃದ್ಧಿ ಕಾರ್ಯಗಳಿಗೆ ಶೇ. 80 ರಷ್ಟು ಪೂರ್ಣ ಬಳಕೆಗೊಂಡಿರುವ ಆಡಿಟ್ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಬೇಕು. ಇದರ ಪರಿಶೀಲನೆ ಬಳಿಕವಷ್ಟೇ ಎರಡನೇ ಕಂತು ಬಿಡುಗಡೆಯಾಗುತ್ತದೆ. ಆದರೆ ಸಂಸದ ಪ್ರತಾಪ ಸಿಂಹ ಅವರು ಮತ್ತು ಸುಮಲತಾ ಅಂಬರೀಶ್ ನಿಧಿ ಬಳಕೆ ದೃಢೀಕರಣ ಪತ್ರ ನೀಡಿದ ಹಿನ್ನಲೆಯಲ್ಲಿ ಇವರಿಗೆ ಎರಡನೇ ಕಂತು ಮಂಜೂರಾಗಿದೆ.
ಈ ನಿಧಿ ಬಳಕೆಯಲ್ಲಿ ಪ್ರತಾಪ್ ಸಿಂಹ ಅವರು ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ವಿನಿಯೋಗಿಸಿದ ರೀತಿ ಅತ್ಯುತ್ತಮವಾಗಿದೆ. ಈಗಾಗಲೇ ಬಿಡುಗಡೆಯಾದ ಎರಡು ಕಂತು ಸೇರಿ ಒಟ್ಟು 4.9 ಕೋಟಿ ರೂ. ಗಳನ್ನು ವಿವಿಧ ಯೋಜನೆಗಳಿಗೆ ಹಂಚಿಕೆ ಮಾಡಿ ಅನುಮೋದನೆ ಪಡೆದುಕೊಂಡಿದ್ದಾರೆ. ವಿಶೇಷ ಎಂದರೆ ಈ ಮೊತ್ತದಲ್ಲಿ 4.36 ಕೋಟಿ ರೂ. ವೆಚ್ಚವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.