ಮಂಗಳೂರು : ಮಂಗಳೂರಿನ ಜನಪದ ಕ್ರೀಡೆ ಕಂಬಳವನ್ನು ಬೆಂಗಳೂರಿನ ಜನರು ಪ್ರತ್ಯಕ್ಷವಾಗಿ ಅನುಭವಿಸಲು ಸಾಧ್ಯವಾಗುವಂತೆ ಬೆಂಗಳೂರು ಮೂಲದ ಟ್ರಾವೆಲ್ ಏಜೆನ್ಸಿ ಕಂಬಳ HOLYDAY ಪ್ಯಾಕೇಜ್ ಘೋಷಿಸಿದೆ.
ಒಂದು ತಂಡದಲ್ಲಿನ 10 ಜನರು ಈ ಪ್ಯಾಕೇಜ್ನಲ್ಲಿ ಮಂಗಳೂರಿನಲ್ಲಿ ನಡೆಯಲಿರುವ ರಾಮ – ಲಕ್ಷ್ಮಣ ಜೋಡುಕೆರೆ ಕಂಬಳದಲ್ಲಿ ವೀಕ್ಷಕರಾಗಿ ಆಗಮಿಸಲಿದ್ದಾರೆ.
ಅರ್ಜುನ್ ಟೂರ್ಸ್ & ಪ್ರೈವೆಟ್ ಲಿಮಿಟೆಡ್ ನ ನಿರ್ವಹಣಾ ನಿರ್ದೇಶಕ ರವಿ ಎಮ್ ಅವರು ಈ ಬಗ್ಗೆ ಮಾತನಾಡಿದ್ದು, “ನನ್ನ ಗೆಳೆಯ ಇತ್ತೀಚೆಗೆ ತೆಗೆದ ಕಂಬಳದ ಅದ್ಭುತ ಚಿತ್ರಗಳನ್ನು ನನಗೆ ತೋರಿಸಿದ. ನಾನು ನೋಡಿ ಆಶ್ಚರ್ಯಗೊಂಡೆ, ಯಾಕೆ ಈ ಕ್ರೀಡೆಯನ್ನು ರಾಜ್ಯದಲ್ಲಿರುವ ವಿದೇಶಿಯರಿಗೆ ಪರಿಚಯಿಸಬಾರದು ಎನ್ನುವ ನಿಟ್ಟಿನಲ್ಲಿ ಯೋಚನೆ ಬಂತು. ಇದರ ಬಗ್ಗೆ ಕಂಬಳದ ಆಯೋಜಕರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಲ್ಲಿ ಮಾತಾಡಿ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಯಿತು” ಎಂದಿದ್ದಾರೆ.
ಎರಡು ದಿನಗಳ ಪ್ಯಾಕೇಜ್ ಬೆಂಗಳೂರಿಗರಿಗೆ ಕರಾವಳಿ ತಿನಿಸು ಮತ್ತು ಸೊಬಗನ್ನು ಪರಿಚಯಿಸುತ್ತದೆ. ಅತಿಥಿಗಳು ಮಾರ್ಚ್ 6 ರಂದು ಮುಂಜಾನೆ ಬೆಂಗಳೂರಿನಿಂದ ಮಂಗಳೂರಿಗೆ ತೆರಳಲಿದ್ದಾರೆ. ನಂತರ, ಅವರು ಸಂಜೆಯ ವೇಳೆಗೆ ಕಂಬಳ ವೀಕ್ಷಿಸಲು ಹೋಗುತ್ತಾರೆ. ಮರುದಿನ, ದಕ್ಷಿಣದ ವಿವಿಧ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ, ನಂತರ ಬೆಂಗಳೂರಿಗೆ ಮರಳಲಿದ್ದಾರೆ ”ಎಂದು ಅವರು ವಿವರಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.