ಚೆನ್ನೈ: ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆಗೆ ಕೇವಲ ಒಂದು ತಿಂಗಳು ಬಾಕಿ ಇದೆ, ಈಗಾಗಲೇ ಆ ರಾಜ್ಯ ಹಲವಾರು ರಾಜಕೀಯ ಕುತೂಹಲಗಳಿಗೆ ಕಾರಣವಾಗಿದೆ. ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಆಪ್ತ ಸಹಾಯಕಿ ವಿ. ಕೆ. ಶಶಿಕಲಾ ಅವರು ರಾಜಕೀಯದಿಂದ ದೂರವಿರುವ ನಿರ್ಧಾರವನ್ನು ಬುಧವಾರ ಪ್ರಕಟಿಸಿದ್ದು, ಎಲ್ಲರಿಗೂ ಅಚ್ಚರಿ ಮೂಡಿಸಿದೆ.
ಚೆನ್ನೈನಲ್ಲಿ ಬಿಡುಗಡೆ ಮಾಡಲಾದ ಹೇಳಿಕೆಯಲ್ಲಿ, ತಾನು ರಾಜಕೀಯದಿಂದ ದೂರವಿರುವುದಾಗಿ ಶಶಿಕಲಾ ಹೇಳಿದ್ದು, ರಾಜ್ಯದಲ್ಲಿ ‘ಅಮ್ಮ’ ಸರ್ಕಾರವನ್ನು ಸ್ಥಾಪಿಸಲು ದೇವರನ್ನು ಮತ್ತು ದಿವಂಗತ ಜಯಲಲಿತಾಳನ್ನು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಎಐಎಡಿಎಂಕೆ ಮತ್ತು ರಾಜಕೀಯ ವಲಯಗಳಲ್ಲಿ ʼಅಮ್ಮʼ ಎಂಬ ಪದವು ಜಯಲಲಿತಾ ಎಂದು ಸೂಚಿಸುತ್ತದೆ. ರಾಜ್ಯದಲ್ಲಿ ಅಮ್ಮ ಸರ್ಕಾರವನ್ನು ಸ್ಥಾಪಿಸಲು ಜಯಲಲಿತಾ ಅವರ ಅನುಯಾಯಿಗಳು ಶ್ರಮಿಸಬೇಕು ಎಂದು ಶಶಿಕಲಾ ಕರೆ ನೀಡಿದ್ದಾರೆ.
ಶಶಿಕಲಾ ಅವರ ಈ ನಿರ್ಧಾರ ತಾತ್ಕಾಲಿಕ ವ್ಯವಸ್ಥೆಯಾಗಿ ಕಾಣುತ್ತದೆ. ಎಐಎಡಿಎಂಕೆ ಪಕ್ಷವು ಏಪ್ರಿಲ್ 6 ರ ವಿಧಾನಸಭಾ ಚುನಾವಣೆಯನ್ನು ಕಳೆದುಕೊಂಡರೆ, ನಂತರ ಪಕ್ಷದ ಹಿಡಿತವನ್ನು ಮರಳಿ ಪಡೆಯಬಹುದು ಎಂಬುದು ಶಶಿಕಲಾ ಲೆಕ್ಕಚಾರವಿರಬಹುದು ಎಂದು ರಾಜಕೀಯ ತಜ್ಞರು ವಿಶ್ಲೇಷಿಸಿದ್ದಾರೆ.
ಬೆಂಗಳೂರಿನಲ್ಲಿ ನಾಲ್ಕು ವರ್ಷಗಳ ಕಾಲ ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲಿನಲ್ಲಿದ್ದ ಶಶಿಕಲಾ ಇತ್ತೀಚೆಗೆ ಹೊರಬಂದಿದ್ದಾರೆ. ಅವರ ರಾಜಕೀಯ ನಡೆ ಎಲ್ಲರಲ್ಲೂ ಭಾರೀ ಕುತೂಹಲವನ್ನು ಮೂಡಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.