ಮೈಸೂರು : ಇಲ್ಲಿನ ಹುಣಸೂರು ಪಟ್ಟಣದೊಳಗೆ ಹರಿದು ಹೋಗುವ ಲಕ್ಷ್ಮಣತೀರ್ಥ ನದಿಯಲ್ಲಿನ ಹಸಿರು ಪಾಚಿಗೆ ಕಲ್ಮಶಗಳು ಸೇರಿ ದುರ್ವಾಸನೆ ಬೀರಲಾರಂಭಿಸಿದೆ.
ಈ ಕಲುಷಿತ ನೀರು ಬಿಳಿಕೆರೆ ಹೋಬಳಿಯ ರಾಮೇನಹಳ್ಳಿ ಬಳಿ ಕಾವೇರಿ ನದಿಗೆ ಸೇರುತ್ತದೆ. ಇಲ್ಲಿ ಹುಣಸೂರು ನಗರದಿಂದ ಹರಿಯುವ ಕೊಳಚೆ ನೀರು ಲಕ್ಷ್ಮಣತೀರ್ಥ ನದಿಯನ್ನು ಸೇರಿ ಕಳುಷಿತಗೊಳಿಸಿದೆ. ಈ ಪ್ರದೇಶವನ್ನು ಅಭಿವೃದ್ಧಿಪಡಿಸಲು, ಈ ನದಿಯ ಮಾಲಿನ್ಯ ತಡೆಯಲು ಹಲವು ಅನುದಾನಗಳು ಬಿಡುಗಡೆಯಾದರೂ ಯೋಜನೆ ಗುರಿ ಫಲಪ್ರದವಾಗಿಲ್ಲ.
ಕಲುಷಿತಗೊಳ್ಳುತ್ತಿರುವ ಕಾವೇರಿ ನದಿ ಮತ್ತು ಅದರ ಉಪನದಿಗಳನ್ನು ಸ್ವಚ್ಛಗೊಳಿಸಲು ನರೇಂದ್ರ ಮೋದಿ ಸರ್ಕಾರ ಕೈಗೊಂಡ ಗಂಗಾ ನದಿ ಸ್ವಚ್ಛತಾ ಅಭಿಯಾನದಂತೆ ಕಾವೇರಿ ನದಿಯನ್ನು ಸ್ವಚ್ಛಗೊಳಿಸಲು ಸರ್ಕಾರ ಮುಂದಾಗಿದೆ.
ಈ ಹಿನ್ನಲೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳು ಸಂಬಂಧಿಸಿದ ಇಲಾಖೆಗಳಿಗೆ ನೋಟಿಸ್ ನೀಡಲು ಪರಿಸರ ಹಾಗೂ ಜೀವ ವಿಜ್ಞಾನ ಇಲಾಖೆ ನಿರ್ಧರಿಸಿದೆ.
ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳಲ್ಲಿ ಸುಮಾರು 98 ಉಪನದಿ, ಹಳ್ಳ, ಕೇರಿಗಳ ಕೊಳಚೆ ನೀರುಗಳು ಕಾವೇರಿ ನದಿ ಸೇರುತ್ತಿದೆ. ಇಲ್ಲಿ ಸಮರ್ಪಕವಾದ ಒಳಚರಂಡಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಸರ್ಕಾರಕ್ಕೆ ಪತ್ರ ಬರೆದಿದೆ.
ಕೊಡಗು ಜಿಲ್ಲೆಯಿಂದ ನದಿಗಳಿಗೆ ಕಲುಷಿತ ನೀರು ಬಿರಲು ಮುಖ್ಯ ಕಾರಣಗಳು ಏನಂದರೆ ಇಲ್ಲಿನ ಹೋಮ್ಸ್ಟೇ ಮತ್ತು ರೆಸಾರ್ಟ್ಗಳು, ಇವುಗಳ ಹೆಚ್ಚಳದಿಂದ ಈ ಸಮಸ್ಯೆ ತಲೆದೋರಿದೆ. ಇಲ್ಲಿನ ಎಲ್ಲಾ ತ್ಯಾಜ್ಯಗಳು ನೀರನ್ನು ಮಲಿನಗೊಳಿಸುತ್ತಿದೆ. ಮತ್ತು ಇಲ್ಲಿನ ದೈವಿಕ ವಿಧಿ ವಿಧಾನಗಳು ನದಿ ಪಕ್ಕದಲ್ಲಿ ನಡೆಯುವುದರಿಂದ ಅಲ್ಲಿನ ತ್ಯಾಜ್ಯಗಳು ಕೂಡ ನದಿ ಸೇರುವುದರಿಂದಲೂ ಈ ಸಮಸ್ಯೆ ಉದ್ಭವಿಸಿದೆ ಎಂದು ಯುಜಿಸಿಗೆ ಸಂಶೋಧನಾ ವರದಿ ಸಲ್ಲಿಸಿದ ಪ್ರೊ. ರಂಗರಾಜು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.