ಲಕ್ನೋ: ಮಾರ್ಚ್ 1 ಮತ್ತು 31 ರ ನಡುವೆ ಉತ್ತರ ಪ್ರದೇಶದ 40,000 ಕ್ಕೂ ಹೆಚ್ಚು ಉನ್ನತ ಪ್ರಾಥಮಿಕ ಶಾಲೆಗಳ ಬಾಲಕಿಯರು ಮಿಷನ್ ಶಕ್ತಿ ಕಾರ್ಯಕ್ರಮದಡಿ ಸ್ವರಕ್ಷಣೆ ತಂತ್ರಗಳನ್ನು ಕಲಿಯಲಿದ್ದಾರೆ ಎಂದು ಉತ್ತರ ಪ್ರದೇಶದ ಶಾಲಾ ಶಿಕ್ಷಣ ಮಹಾನಿರ್ದೇಶಕ ವಿಜಯ್ ಕಿರಣ್ ಆನಂದ್ ತಿಳಿಸಿದ್ದಾರೆ.
“ಈ ತರಗತಿಗಳು ಗ್ರಾಮೀಣ ವಿದ್ಯಾರ್ಥಿಗಳಿಗೆ ತಮ್ಮ ಆತ್ಮವಿಶ್ವಾಸ ಮತ್ತು ಸ್ವಾಭಿಮಾನವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. 6 ರಿಂದ 8 ನೇ ತರಗತಿಯ ಬಾಲಕಿಯರು ತಮ್ಮ ರಕ್ಷಣೆಯನ್ನು ತಾವೇ ಮಾಡುವ ಸಮಯ ಇದು. ವಿಷಯಗಳನ್ನು ಕಲಿಯಲು ಸಾಧ್ಯವಾದಾಗ ಅವರು ಸಣ್ಣ ವಯಸ್ಸಿನಿಂದಲೇ ಆತ್ಮರಕ್ಷಣೆ ತಂತ್ರಗಳನ್ನು ಕಲಿಯುತ್ತಾರೆ. ಭಾಗವಹಿಸುವವರಿಗೆ ಪ್ರಮಾಣಪತ್ರಗಳನ್ನು ಸಹ ನೀಡಲಾಗುವುದು “ಎಂದು ಅವರು ಹೇಳಿದ್ದಾರೆ.
ಶಿಕ್ಷಣ ಇಲಾಖೆಯು 10,748 ದೈಹಿಕ ಶಿಕ್ಷಣ ಬೋಧಕರನ್ನು ಹೊಂದಿದ್ದು, ಬಾಲಕಿಯರಿಗೆ ತರಬೇತಿ ನೀಡುವ ಜವಾಬ್ದಾರಿಯನ್ನು ಅವರಿಗೆ ವಹಿಸಲಾಗಿದೆ ಎಂದು ಅವರು ಹೇಳಿದರು. ಈ ಉದ್ದೇಶಕ್ಕಾಗಿ ಇಲಾಖೆ ಪ್ರತಿ ಶಾಲೆಗೆ ರೂ 3,000 ನಿಗದಿಪಡಿಸಲಾಗಿದೆ.
ತರಬೇತುದಾರರು ತಮ್ಮದೇ ಶಾಲೆ ಮತ್ತು ಹತ್ತಿರದ ಶಾಲೆಗೆ ತೆರಳಿ ತರಬೇತಿ ನೀಡಲಿದ್ದಾರೆ ಎಂದು ವಿಜಯ್ ಕಿರಣ್ ಆನಂದ್ ಅವರು ರಾಜ್ಯದ ಎಲ್ಲಾ 75 ಜಿಲ್ಲೆಗಳಿಗೆ ನೀಡಿರುವ ಆದೇಶದಲ್ಲಿ ತಿಳಿಸಿದ್ದಾರೆ.
ಸ್ವರಕ್ಷಣೆ ತರಬೇತಿಯ ಮುಖ್ಯ ಉದ್ದೇಶವೆಂದರೆ ಹೆಣ್ಣುಮಕ್ಕಳನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಬಹುದು, ಇದರಿಂದಾಗಿ ಅವರು ಯಾವುದೇ ಕೆಟ್ಟ ಪರಿಸ್ಥಿತಿಯಲ್ಲೂ ಸಂಘರ್ಷಕ್ಕೆ ಒಳಪಡುವುದಿಲ್ಲ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.