ನವದೆಹಲಿ: ಮುಂಬಯಿ ಸ್ಫೋಟದ ರುವಾರಿ ಮತ್ತು ಭಾರತಕ್ಕೆ ಬೇಕಾದ ಮೋಸ್ಟ್ ವಾಟೆಂಡ್ ಭೂಸಗತ ಪಾತಕಿ ದಾವೂದ್ ಇಬ್ರಾಹಿಂ ಭಾರತಕ್ಕೆ ಬರುವ ಆಫರ್ನ್ನು ನೀಡಿದ್ದ ಆದರೆ ಆಗ ಅಧಿಕಾರದಲ್ಲಿದ್ದ ಯುಪಿಎ ಅದನ್ನು ನಿರಾಕರಿಸಿತ್ತು ಎಂದು ವರದಿಯೊಂದು ತಿಳಿಸಿದೆ.
ದಾವೂದ್ ಭಾರತಕ್ಕೆ ವಾಪಾಸ್ಸಾಗಲು ನಿರ್ಧರಿಸಿದ್ದ, ಆ ಬಗ್ಗೆ ಯುಪಿಎ ಸಚಿವರುಗಳೊಂದಿಗೆ ಮಾತುಕತೆಕತೆಯನ್ನೂ ನಡೆಸಿದ್ದ, ಕಾಂಗ್ರೆಸ್ ಹಲವು ಸುತ್ತಿನ ಉನ್ನತ ಸಮಾಲೋಚನೆಗಳನ್ನು ನಡೆಸಿತ್ತು . ಆದರೆ ಕೊನೆಯದಾಗಿ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಆತನ ಮರಳುವಿಕೆಯನ್ನು ತಿರಸ್ಕರಿಸಿದರು ಎಂದು ದಿ ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯ ವರದಿ ತಿಳಿಸಿದೆ.
ದಾವೂದ್ ಮರಳುವಿಕೆಯ ಬಗ್ಗೆ ಆಗಿನ ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ್ ಮೆನನ್ ಮತ್ತು ಸಿಂಗ್ ನಡುವೆ ಗಂಭೀರ ಚರ್ಚೆ, ಸಮಾಲೋಚನೆಗಳು ನಡೆದಿದ್ದವು ಎನ್ನಲಾಗಿದೆ.
ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಆತ ಭಾರತಕ್ಕೆ ವಾಪಾಸ್ ಬಂದು ತನ್ನ ಕುಟುಂಬ ಸದಸ್ಯರೊಂದಿಗೆ ವಾಸಿಸಲು ಬಯಸಿದ್ದ ಆದರೆ ಯುಪಿಎ ಆತನ ಆಫರ್ನ್ನು ತಿರಸ್ಕರಿಸಿತ್ತು ಎಂದು ಹೇಳಲಾಗಿದೆ.
ಆದರೆ ಮನಮೋಹನ್ ಸಿಂಗ್ ಈ ವರದಿಯನ್ನು ತಿರಸ್ಕರಿಸಿದ್ದಾರೆ, ಇಮೇಲ್ ಮೂಲಕ ಪ್ರತಿಕ್ರಿಯೆ ನೀಡಿರುವ ಅವರು ಭೂಗತ ಪಾತಕಿಯ ಮರಳುವಿಕೆಯ ಬಗ್ಗೆ ಯಾವುದೇ ಆಫರ್ ಇರಲಿಲ್ಲ, ಸಮಾಲೋಚನೆಗಳೂ ನಡೆದಿರಲಿಲ್ಲ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.