ನವದೆಹಲಿ: ಹಿರಿಯ ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಜಾದ್ ಅವರು ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದು, ಮೋದಿ ಒಬ್ಬ ಹೆಮ್ಮೆಯ ನಾಯಕ ಎಂದು ಹೇಳಿದ್ದಾರೆ.
ಫೆಬ್ರವರಿ 27 ರ ಶನಿವಾರ ರಾಜ್ಯಸಭೆಯಿಂದ ನಿವೃತ್ತರಾದ ಗುಲಾಮ್ ನಬಿ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ‘ಗ್ರೂಫ್ ಆಫ್ 23 ’ ಕಾಂಗ್ರೆಸ್ ಮುಖಂಡರೊಂದಿಗೆ ವೇದಿಕೆಯನ್ನು ಹಂಚಿಕೊಂಡರು.
ಜಮ್ಮುವಿನಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಆಜಾದ್, ಸಜ್ಜನ ಹಿನ್ನೆಲೆಯಿಂದ ಬಂದ ಪ್ರಧಾನಮಂತ್ರಿ ಎಂದಿಗೂ ತನ್ನತನವನ್ನು ಮರೆಮಾಡಲು ಪ್ರಯತ್ನಿಸಲಿಲ್ಲ ಎಂಬ ಬಗ್ಗೆ ನಾನು ಶ್ಲಾಘಿಸುತ್ತೇನೆ ಎಂದಿದ್ದಾರೆ.
“ನಾನು ಅನೇಕ ನಾಯಕರ ಬಗ್ಗೆ ಬಹಳಷ್ಟು ವಿಷಯಗಳನ್ನು ಇಷ್ಟಪಡುತ್ತೇನೆ. ನಾನು ಹಳ್ಳಿಯವನು ಮತ್ತು ಅದರ ಬಗ್ಗೆ ಹೆಮ್ಮೆಪಡುತ್ತೇನೆ, ಚಹಾ ಮಾರಾಟ ಮಾಡುತ್ತಿದ್ದ ನಮ್ಮ ಪ್ರಧಾನ ಮಂತ್ರಿಯಂತಹ ನಾಯಕರು ಕೂಡ ಹಳ್ಳಿಗಳಿಂದ ಬಂದಿದ್ದಾರೆ ಎಂದು ನನಗೆ ಹೆಮ್ಮೆ ಇದೆ. ನಾವು ಪ್ರತಿಸ್ಪರ್ಧಿಗಳಾಗಿರಬಹುದು ಆದರೆ ಅವರು ತನ್ನ ತನವನ್ನು ಮರೆಮಾಡಲಿಲ್ಲ ಎಂದು ನಾನು ಪ್ರಶಂಸಿಸುತ್ತೇನೆ” ಎಂದಿದ್ದಾರೆ.
“ಒಬ್ಬ ವ್ಯಕ್ತಿಯು ತಾನು ಯಾರು ಮತ್ತು ಅವನು ಎಲ್ಲಿಂದ ಬಂದಿದ್ದೇನೆ ಎಂಬುದರ ಬಗ್ಗೆ ಹೆಮ್ಮೆ ಪಡಬೇಕು. ನಾನು ಪ್ರಪಂಚವನ್ನು ಪಯಣಿಸಿದ್ದೇನೆ ಮತ್ತು 5-ಸ್ಟಾರ್ ಹೋಟೆಲ್ಗಳಲ್ಲಿ, 7-ಸ್ಟಾರ್ ಹೋಟೆಲ್ಗಳಲ್ಲಿ ಉಳಿದುಕೊಂಡಿದ್ದೇನೆ, ಆದರೆ ನಾನು ನನ್ನ ಹಳ್ಳಿಯ ಜನರೊಂದಿಗೆ ಕುಳಿತಾಗ ಆಗುವ ಅನುಭವವೇ ಬೇರೆ, ಅದು ವಿಶೇಷವಾಗಿದೆ”ಎಂದು ಅವರು ಹೇಳಿದರು.
“ಪ್ರಧಾನಿಯಾದ ನಂತರ, ಮೋದಿ ತಮ್ಮ ಬೇರುಗಳನ್ನು ಮರೆತಿಲ್ಲ ಮತ್ತು ಹೆಮ್ಮೆಯಿಂದ ತಮ್ಮನ್ನು ಚಾಯ್ ವಾಲಾ ಎಂದು ಕರೆದರು. ನಾನು ಅವರೊಂದಿಗೆ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದರೂ, ಪ್ರಧಾನಿ ಮೋದಿ ಅವರು ಬಹಳ ಆದರಣೀಯ ವ್ಯಕ್ತಿ ” ಎಂದು ಆಜಾದ್ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.