ನವದೆಹಲಿ: ಕೇಂದ್ರ ಜವಳಿ ಸಚಿವೆ ಸ್ಮೃತಿ ಇರಾನಿ ಇಂದು ವಾಣಿಜ್ಯ ಸೆಣಬಿನ ಬೀಜ ವಿತರಣಾ ಯೋಜನೆಯನ್ನು ಜಾರಿಗೊಳಿಸಿದ್ದಾರೆ. ಜೂಟ್ ಕಾರ್ಪೊರೇಷನ್ ಆಫ್ ಇಂಡಿಯಾವು ಕಳೆದ ವರ್ಷ, 2021-22ನೇ ಸಾಲಿಗೆ 1 ಸಾವಿರ ಮೆಟ್ರಿಕ್ ಟನ್ ಪ್ರಮಾಣೀಕೃತ ಸೆಣಬಿನ ಬೀಜಗಳ ವಾಣಿಜ್ಯ ವಿತರಣೆಗಾಗಿ ರಾಷ್ಟ್ರೀಯ ಬೀಜಗಳ ನಿಗಮದೊಂದಿಗೆ ಒಪ್ಪಂದ ಮಾಡಿಕೊಂಡಿತ್ತು.
ದೇಶದ ಸೆಣಬು ರೈತರಿಗೆ ಸಹಾಯ ಮಾಡಲು ಕೇಂದ್ರವು ಮಾಡಿರುವ ಕಾರ್ಯಗಳನ್ನು ಉಲ್ಲೇಖಿಸಿದ ಇರಾನಿ, ಕಳೆದ 6 ವರ್ಷಗಳಲ್ಲಿ ಸೆಣಬಿನ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಯನ್ನು ಸರ್ಕಾರವು ಶೇಕಡಾ 76 ರಷ್ಟು ಹೆಚ್ಚಿಸಿದೆ ಎಂದು ಹೇಳಿದರು. ಸೆಣಬಿನ ಎಂಎಸ್ಪಿ 2020-21ರ ಆರ್ಥಿಕ ವರ್ಷದಲ್ಲಿ 4 ಸಾವಿರ 225 ರೂಪಾಯಿಗಳಾಗಿದ್ದು, 2014-15ರಲ್ಲಿ 2 ಸಾವಿರ 400 ಇತ್ತು. ಸೆಣಬಿನ ಬೀಜಗಳ ಹೆಚ್ಚು ಉತ್ಪಾದಕ ರೂಪಾಂತರವು ದೇಶದ ಸುಮಾರು 5 ಲಕ್ಷ ಸೆಣಬು ರೈತರ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಜವಳಿ ಸಚಿವರು ಪ್ರತಿಪಾದಿಸಿದರು.
ಸೆಣಬು ಬೆಳೆಯುತ್ತಿರುವ ರೈತರಿಗೆ ಬೆಂಬಲವನ್ನು ನೀಡಲು ಕೃಷಿ ಸಚಿವಾಲಯ ಮತ್ತು ಜವಳಿ ಸಚಿವಾಲಯವು ವರ್ಧಿತ ಸಮನ್ವಯದೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದು ಇರಾನಿ ಹೇಳಿದರು.
ಸೆಣಬಿನ ಸಾಮಗ್ರಿಗಳಲ್ಲಿ ಕಡ್ಡಾಯವಾಗಿ ಪ್ಯಾಕೇಜಿಂಗ್ ಮಾಡುವ ಬಗ್ಗೆ ಕೇಂದ್ರದ ನಿರ್ಧಾರವು ಸುಮಾರು 40 ಲಕ್ಷ ಕೃಷಿ ಆಧಾರಿತ ಮನೆಗಳನ್ನು ಒಳಗೊಂಡಂತೆ ನೇರವಾಗಿ 4 ಲಕ್ಷ ರೈತರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಅವರು ಮಾಹಿತಿ ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.