ನವದೆಹಲಿ: ಭಾರತದಲ್ಲಿ ನಕ್ಸಲ್ ವಾದಕ್ಕೆ ಹಿನ್ನಡೆಯಾಗುತ್ತಿದೆ, 2009 ರಿಂದ 2014 ರವರೆಗಿನ ಆರು ವರ್ಷಗಳಿಗೆ ಹೋಲಿಸಿದರೆ, 2015 ಮತ್ತು 2020 ರ ನಡುವೆ ಎಡಪಂಥೀಯ ಉಗ್ರವಾದಕ್ಕೆ ಸಂಬಂಧಿಸಿದ ಘಟನೆಗಳು ಶೇಕಡಾ 47 ರಷ್ಟು ಕಡಿಮೆಯಾಗಿದೆ ಎಂದು ಮೂಲಗಳು ವರದಿ ಮಾಡಿವೆ.
ಬುಧವಾರ ರಾಜ್ಯಸಭೆಯಲ್ಲಿ ಲಿಖಿತ ಉತ್ತರ ನೀಡಿದ ಗೃಹ ಖಾತೆ ರಾಜ್ಯ ಸಚಿವರು, 2013 ರಲ್ಲಿ 10 ರಾಜ್ಯಗಳ 76 ಜಿಲ್ಲೆಗಳಲ್ಲಿ ನಕ್ಸಲರ ಉಪಸ್ಥಿತಿ ಇತ್ತು. 2020ರಲ್ಲಿ ಅದು 9 ರಾಜ್ಯಗಳ 53 ಜಿಲ್ಲೆಗಳಿಗೆ ಇಳಿದಿದೆ ಎಂದಿದ್ದಾರೆ.
ಎಡಪಂಥೀಯ ಉಗ್ರವಾದ ಎದುರಿಸಲು ಬಹುಮುಖಿ ಕಾರ್ಯತಂತ್ರವನ್ನು ಸ್ಥಿರವಾಗಿ ಅನುಷ್ಠಾನಗೊಳಿಸುವುದರಿಂದ ಹಿಂಸಾಚಾರದಲ್ಲಿ ನಿರಂತರ ಕುಸಿತವಾಗಿದೆ ಮತ್ತು ನಕ್ಸಲರ ಭೌಗೋಳಿಕ ಹರಡುವಿಕೆಯಲ್ಲಿ ಕುಗ್ಗುವಿಕೆ ಉಂಟಾಗಿದೆ ಎಂದು ಸಚಿವ ಜಿ ಕಿಶನ್ ರೆಡ್ಡಿ ಹೇಳಿದರು.
“ಎಡಪಂಥೀಯ ಹಿಂಸಾಚಾರದ ಘಟನೆಗಳು 2009 ರಲ್ಲಿ ಸಾರ್ವಕಾಲಿಕ ಗರಿಷ್ಠ 2,258 ರಿಂದ 2020 ರಲ್ಲಿ 665 ಕ್ಕೆ ಇಳಿದಿದೆ. ಅದೇ ರೀತಿ ಸಾವುಗಳು (ನಾಗರಿಕರು + ಪಡೆಗಳು) 2010 ರಲ್ಲಿ ಸಾರ್ವಕಾಲಿಕ ಗರಿಷ್ಠ 1,005 ರಿಂದ 2020 ರಲ್ಲಿ 183 ಕ್ಕೆ 80% ರಷ್ಟು ಕಡಿಮೆಯಾಗಿದೆ. ಹರಡುವಿಕೆಯನ್ನು ನಿರ್ಬಂಧಿಸಲಾಗಿದೆ. 2013 ರಲ್ಲಿಇದ್ದ 10 ರಾಜ್ಯಗಳಿಗೆ ಹೋಲಿಸಿದರೆ ಕೇವಲ 9 ರಾಜ್ಯಗಳು ಮಾತ್ರ ಈಗ ಎಡಪಂಥೀಯ ಸಂಬಂಧಿತ ಹಿಂಸಾಚಾರವನ್ನು ವರದಿ ಮಾಡಿವೆ” ಎಂದು ಅವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.