ನವದೆಹಲಿ: ರಾಷ್ಟ್ರಗಳ ಭಾಷಣದ ಮೇಲೆ ಲೋಕಸಭೆಯಲ್ಲಿ ವಂದನಾ ಭಾಷಣವನ್ನು ಮಾಡಿದ ಇಂದು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ದೇಶಕ್ಕೆ ‘ಆಂದೋಲನಕಾರರು ಮತ್ತು ಆಂದೋಲನಜೀವಿಗಳ ನಡುವಣ ವ್ಯತ್ಯಾಸವನ್ನು ತೋರಿಸಬೇಕಾಗಿದೆ ಎಂದು ಹೇಳಿದರು.
ಸಾರ್ವಜನಿಕ ವಲಯವು ಅತ್ಯಗತ್ಯ ಆದರೆ ಅದೇ ಸಮಯದಲ್ಲಿ ಖಾಸಗಿ ವಲಯದ ಪಾತ್ರವೂ ಅತ್ಯಗತ್ಯ ಎಂದ ಪ್ರಧಾನಿ, ಭಾರತವು ಮಾನವೀಯತೆಗೆ ಸೇವೆ ಸಲ್ಲಿಸಲು ಸಾಧ್ಯವಾದರೆ ಅದರಲ್ಲಿ ಖಾಸಗಿ ವಲಯದ ಪಾತ್ರವೂ ಇದೆ ಎಂದು ಹೇಳಿದ್ದಾರೆ.
“ಮೂರು ಕೃಷಿ ಮಸೂದೆಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿರುವ ರೈತರ ಬಗ್ಗೆ ಕೇಂದ್ರ ಸರ್ಕಾರ ಮತ್ತು ಸಂಸತ್ತು ಹೆಚ್ಚಿನ ಗೌರವವನ್ನು ಹೊಂದಿವೆ ಮತ್ತು ಅದಕ್ಕಾಗಿಯೇ ಉನ್ನತ ಮಂತ್ರಿಗಳು ಅವರೊಂದಿಗೆ ಮಾತನಾಡುತ್ತಿದ್ದಾರೆ. ಮೂರು ಕಾನೂನುಗಳು ಜಾರಿಗೆ ಬಂದ ನಂತರ ಯಾವುದೇ ಕೃಷಿ ‘ಮಂಡಿ’ (ಮಾರುಕಟ್ಟೆ) ಸ್ಥಗಿತಗೊಂಡಿಲ್ಲ ಅಥವಾ ಎಂಎಸ್ಪಿ ನಿಂತಿಲ್ಲ” ಎಂದಿದ್ದಾರೆ.
“ಜನರು ಸತ್ಯವನ್ನು ನೋಡಬಹುದೆಂಬುದನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗದ ಕಾರಣ ಕೆಲವರು ಸದನದಲ್ಲಿ ಯೋಜಿತ ಕಾರ್ಯತಂತ್ರದೊಂದಿಗೆ ಅಡ್ಡಿಪಡಿಸುವ ಕಾರ್ಯ ಮಾಡುತ್ತಿದ್ದಾರೆ. ಅವರ ಆಟಗಳ ಮೂಲಕ ಜನರ ನಂಬಿಕೆಯನ್ನು ಎಂದಿಗೂ ಗೆಲ್ಲಲು ಸಾಧ್ಯವಿಲ್ಲ” ಎಂದಿದ್ದಾರೆ.
“ನಾನು ರೈತ ಆಂದೋಲನವನ್ನು ಪವಿತ್ರವೆಂದು ಪರಿಗಣಿಸುತ್ತೇನೆ. ಭಾರತದ ಪ್ರಜಾಪ್ರಭುತ್ವದಲ್ಲಿ ಈ ಆಂದೋಲನಕ್ಕೆ ಪ್ರಾಮುಖ್ಯತೆ ಇದೆ, ಆದರೆ ಪ್ರತಿಭಟನಾಕಾರರು ತಮ್ಮ ಸ್ವಂತ ಲಾಭಕ್ಕಾಗಿ ಪವಿತ್ರ ಚಳವಳಿಯನ್ನು ಕಲುಷಿತಗೊಳಿಸಲು ಮುಂದಾಗಿದ್ದಾರೆ. ಜೈಲಿನಲ್ಲಿರುವ ಗಲಭೆಕೋರರು, ಕಮ್ಯುನಿಸ್ಟರು, ಭಯೋತ್ಪಾದಕರ ಫೋಟೋ ಹಿಡಿದು ಅವರ ಬಿಡುಗಡೆಗೆ ಒತ್ತಾಯಿಸುವುದು ರೈತ ಆಂದೋಲನವನ್ನು ಅಪವಿತ್ರಗೊಳಿಸುತ್ತದೆ. ರೈತರ ಪವಿತ್ರ ಆಂದೋಲನವನ್ನು ಹಾಳುಮಾಡುವ ಕೆಲಸವನ್ನು ಆಂದೋಲನಕಾರರು ಅಲ್ಲ, ಆಂದೋಲನ ಜೀವಿಗಳು ಮಾಡಿದ್ದಾರೆ. ಹೀಗಾಗಿ ದೇಶಕ್ಕೆ ಆಂದೋಲನಕಾರರು ಮತ್ತು ಆಂದೋಲನಜೀವಿಗಳ ನಡುವಣ ವ್ಯತ್ಯಾಸವನ್ನು ತೋರಿಸುವುದು ಬಹಳ ಮುಖ್ಯ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.