ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಇಂದು ವರ್ಚುವಲ್ ಶೃಂಗಸಭೆ ನಡೆಸಿದರು. ಶಹತೂತ್ ಅಣೆಕಟ್ಟು ಯೋಜನೆಯ ನಿರ್ಮಾಣದ ಬಗ್ಗೆ ಉಭಯ ದೇಶಗಳು ಈ ವೇಳೆ ತಿಳುವಳಿಕೆ ಒಪ್ಪಂದ ಪತ್ರಕ್ಕೆ ಸಹಿ ಹಾಕಿದರು.
ಈ ಒಪ್ಪಂದಕ್ಕೆ ವಿದೇಶಾಂಗ ಸಚಿವ ಡಾ.ಜೈಶಂಕರ್ ಮತ್ತು ಅಫ್ಘಾನಿಸ್ಥಾನ ವಿದೇಶಾಂಗ ಸಚಿವ ಹನೀಫ್ ಅಟ್ಮಾರ್ ಸಹಿ ಹಾಕಿದರು. ಅಣೆಕಟ್ಟು ಕಾಬೂಲ್ ನಗರದ ಸುರಕ್ಷಿತ ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸುತ್ತದೆ, ಹತ್ತಿರದ ಪ್ರದೇಶಗಳಿಗೆ ನೀರಾವರಿ ನೀರನ್ನು ಒದಗಿಸುತ್ತದೆ ಮತ್ತು ಈ ಪ್ರದೇಶಕ್ಕೆ ವಿದ್ಯುತ್ ಒದಗಿಸುತ್ತದೆ. ಈ ಯೋಜನೆಯು ಭಾರತ ಮತ್ತು ಅಫ್ಘಾನಿಸ್ಥಾನ ನಡುವಿನ ಹೊಸ ಅಭಿವೃದ್ಧಿ ಸಹಭಾಗಿತ್ವದ ಒಂದು ಭಾಗವಾಗಿದೆ.
ಭಾರತ ಮತ್ತು ಅಫ್ಘಾನಿಸ್ಥಾನ ಎರಡೂ ದೇಶಗಳು ನಮ್ಮ ಪ್ರದೇಶವನ್ನು ಭಯೋತ್ಪಾದನೆಯಿಂದ ಮುಕ್ತವಾಗಿ ನೋಡಲು ಬಯಸುತ್ತವೆ ಎಂದು ಮೋದಿ ಹೇಳಿದ್ದಾರೆ.
ಅಫ್ಘಾನಿಸ್ಥಾನದಲ್ಲಿ ಹಿಂಸಾಚಾರ ಹೆಚ್ಚುತ್ತಿರುವ ಬಗ್ಗೆ ಆತಂಕವಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. “ಅಫ್ಘಾನಿಸ್ಥಾನದಲ್ಲಿ ಹಿಂಸಾಚಾರದ ಏರಿಕೆಯ ಬಗ್ಗೆ ನನಗೆ ಕಾಳಜಿ ಇದೆ. ನಾಗರಿಕರು, ಪತ್ರಕರ್ತರು ಮತ್ತು ಕಾರ್ಮಿಕರನ್ನು ಭಯೋತ್ಪಾದಕರು ಗುರಿಯಾಗಿಸುವುದು ಹೇಡಿತನದ ಕ್ರಮ. ಯುದ್ಧವನ್ನು ತಕ್ಷಣ ನಿಲ್ಲಿಸಲು ನಾವು ಬೆಂಬಲಿಸುತ್ತೇವೆ. ಭಾರತ ಮತ್ತು ಅಫ್ಘಾನಿಸ್ಥಾನ ಎರಡೂ ಈ ಪ್ರದೇಶವನ್ನು ಭಯೋತ್ಪಾದನೆ ಮುಕ್ತವಾಗಿ ನೋಡಲು ಬಯಸುತ್ತದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.