ಜಾಲ್ಪೈಗುರಿ: ಆರೆಸ್ಸೆಸ್ನ ಪ್ರಚಾರಕರು ಹಾಗೂ ಅಖಿಲ ಭಾರತೀಯ ಸೇವಾ ಪ್ರಮುಖರಾದ ಸೀತಾರಾಮ ಕೆದಿಲಾಯ ನೇತೃತ್ವದ ಭಾರತ ಪರಿಕ್ರಮ ಯಾತ್ರೆಯು 3 ವರ್ಷಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ಕನ್ಯಾಕುಮಾರಿಯಿಂದ ಆ.09, 2012ರಂದು ಆರಂಭವಾದ ಈ ಯಾತ್ರೆಯು ಆ.09, 2015ರಂದು ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆ ತಲುಪಿದೆ. ಸೀತಾರಾಮ ಕೆದಿಲಾಯ (68) ಅವರು ಕನ್ಯಾಕುಮಾರಿಯಿಂದ ಕಾಲ್ನಡಿಗೆ ಮೂಲಕ ಆರಂಭಿಸಿದ ಈ ಯಾತ್ರೆಯು 15,070 ಕಿ.ಮೀ. ಹಾದಿಯನ್ನು ಪೂರೈಸಿದ್ದು, ಈಗಾಗಲೇ 17 ರಾಜ್ಯಗಳ 1210 ಹಳ್ಳಿಗಳಿಗೆ ಭೇಟಿ ನೀಡಿದ್ದಾರೆ.
ಅವರು ಈ ಯಾತ್ರೆಯ ಮೂಲಕ ಹಳ್ಳಿಯ ಜನಜೀವನ, ನೀರಿನ ಸಂರಕ್ಷಣೆ, ಪರಿಸರ ಮತ್ತು ಗ್ರಾಮೀಣ ಭಾರತೀಯ ಮೌಲ್ಯಗಳ ಬಗ್ಗೆ ಜನಜಾಗೃತಿ ಮೂಡಿಸುವ ಉದ್ದೇಶ ಹೊಂದಿದ್ದಾರೆ.
ಆರೆಸ್ಸೆಸ್ನ ಸಹ ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ವಿ. ಭಾಗಯ್ಯಾ, ರಾಷ್ಟ್ರೀಯ ಕಾರ್ಯಕರ್ತರಾದ ಡಾ. ಮನಮೋಹನ ವೈದ್ಯ, ಮಂಗೇಶ ಭೇಂಡೆ, ಸಿ. ಆರ್. ಮುಕುಂದ, ಕ್ಷೇತ್ರೀಯ ಸಂಘಚಾಲಕ ವಿ. ನಾಗರಾಜ ಅವರು ಕೆದಿಲಾಯ ಅವರನ್ನು ಅಭಿನಂದಿಸಿದರು ಹಾಗೂ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು.
ಈ ಯಾತ್ರೆಯ ಮೂಲಕ ಅವರು ಎ.೧ರಂದು ಅಸ್ಸಾಂ ಪ್ರವೇಶಿಸಿದ್ದು, ನಂತರ ಮೇಘಾಲಯ, ಅರುಣಾಚಲ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಮುಂದಿನ ತಿಂಗಳುಗಳಲ್ಲಿ ಬಿಹಾರ, ಒರಿಸ್ಸಾ, ಛತ್ತೀಸ್ಗಢ, ಜಾರ್ಖಂಡ್, ಆಂಧ್ರ, ತೆಲಂಗಾಣ, ತಮಿಳುನಾಡು ಮೂಲಕ ಕನ್ಯಾಕುಮಾರಿಗೆ ತಲುಪಿ ತಮ್ಮ ಯಾತ್ರೆಯನ್ನು ಪೂರ್ಣಗೊಳಿಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.