ಬೆಂಗಳೂರು: 2020 ನೇ ಸಾಲಿನ ಕರ್ನಾಟಕ ನಾಟಕ ಅಕಾಡೆಮಿಯ ಪ್ರಶಸ್ತಿ ಘೋಷಣೆಯಾಗಿದೆ. ಈ ಪ್ರಶಸ್ತಿಗೆ ಒಟ್ಟು 25 ಮಂದಿ ಸಾಧಕರು ಆಯ್ಕೆಯಾಗಿದ್ದಾರೆ.
ಪ್ರಶಸ್ತಿ ಸಮಾರಂಭವು 2021 ರ ಮಾರ್ಚ್ ತಿಂಗಳಿನಲ್ಲಿ ಬಳ್ಳಾರಿಯಲ್ಲಿ ನಡೆಯಲಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿ ತಿಳಿಸಿದೆ. ಜೀವಮಾನದ ರಂಗ ಗೌರವ ಪ್ರಶಸ್ತಿಗೆ ಎಸ್ ಎನ್ ಸೇಥೂರಾಂ ಅವರನ್ನು ಆಯ್ಕೆ ಮಾಡಲಾಗಿದೆ.
ಉಳಿದಂತೆ ವಾರ್ಷಿಕ ರಂಗ ಪ್ರಶಸ್ತಿಗೆ ಸಂತೋಷ್ ಕುಮಾರ್ ಕುಸನೂರ ಕಲ್ಬುರ್ಗಿ, ರಾಯಚೂರಿನ ಎಂ ಇಸ್ಮಾಯಿಲ್ ಸಾಬ್, ಕೊಪ್ಪಳದ ಭರಮಪ್ಪ ಜುಟ್ಲದ, ಬಳ್ಳಾರಿ ಹೊಸಪೇಟೆಯ ಮಾ ಭ ಸೋಮಣ್ಣ, ಬಳ್ಳಾರಿಯ ಗೆಣಿಕೆಹಾಳು ತಿಮ್ಮನಗೌಡ ಮೇಲುಸೀಮೆ, ವಿಜಯಪುರದಿಂದ ಗುರುಬಸಪ್ಪ ಕಲ್ಲಪ್ಪ ಸಜ್ಜನ, ಬಾಗಲಕೋಟೆಯ ಹಣಮವ್ವ ಗಾಜರ ಕುಳಲಿ, ಬಾಗಲಕೋಟೆಯ ಪಿ ಢಗಳಚಂದ್ರ ಪವಾರ, ಗದಗದ ಉಮಾದೇವಿ ಹಿರೇಮಠ, ಧಾರವಾಡದ ಬಸವರಾಜ ಬ ಕಡ್ಲೆಣ್ಣನವರ, ದಾವಣಗೆರೆಯ ಐರಣಿ ಬಸವರಾಜ, ಚಿತ್ರದುರ್ಗದ ನೂರ್ಜಹಾನ್ ಗೊರಜಿನಾಳ್, ಚಿಕ್ಕಮಗಳೂರಿನ ಮಹಾವೀರ ಜೈನ್, ಮೈಸೂರಿನ ಅಶ್ವತ್ಥ ಕದಂಬ, ಕೊಡಗಿನ ಚಂದ್ರಶೇಖರಯ್ಯ ಎಂ ಆರ್, ಮಂಡ್ಯದ ಧನ್ಯಕುಮಾರ್, ಚಾಮರಾಜನಗರದ ವೆಂಕಟರಮಣಸ್ವಾಮಿ, ಉಡುಪಿ ಉಪ್ಪುಂದದ ಶ್ರೀನಿವಾಸ ಪ್ರಭು, ಮಂಗಳೂರಿನ ರೋಹಿಣಿ ಜಗರಾಂ, ಬೆಂಗಳೂರು ಗ್ರಾಮಾಂತರದ ಕೆ ಎನ್ ವಾಸುದೇವಮೂರ್ತಿ, ಬೆಂಗಳೂರು ನಗರದ ವಿ ಲಕ್ಷ್ಮೀಪತಿ, ಬೆಂಗಳೂರು ನಗರದ ಎಂ ಎಸ್ ವಿದ್ಯಾ, ಬೆಂಗಳೂರು ನಗರದ ಮಂಜುಳಾ ಬಿ ಎನ್, ಗೀತಾ ಸುರತ್ಕಲ್, ಬಾಬು ಹಿರಣ್ಣಯ್ಯ ಆಯ್ಕೆಯಾಗಿದ್ದಾರೆ.
ಕಲ್ಚರ್ಡ್ ಕೆಮೆಡಿಯನ್ ಕೆ ಹಿರಣ್ಣಯ್ಯ ದತ್ತಿ ಪುರಸ್ಕಾರಕ್ಕೆ ಬೆಂಗಳೂರಿನ ಮಾ. ಭಾಸ್ಕರ, ನಟರತ್ನ ಚಿಂದೋಡಿ ವೀರಪ್ಪನವರ ದತ್ತಿ ಪುರಸ್ಕಾರಕ್ಕೆ ಕೊಪ್ಪಳದ ವೆಂಕಣ್ಣ ಕಾಮನೂರು, ಪದ್ಮಶ್ರೀ ಚಿಂದೋಡಿ ಲೀಲಾ ದತ್ತಿ ಪುರಸ್ಕಾರಕ್ಕೆ ಧಾರವಾಡದ ಅನ್ನಪೂರ್ಣ ಹೊಸಮನಿ, ಕೆ ರಾಮಚಂದ್ಯಯ್ಯ ಧತ್ತಿನಿಧಿ ಪುರಸ್ಕಾರಕ್ಕೆ ಬೆಳಗಾವಿಯ ರಂಗಸಂಪದ, ಶ್ರೀಮತಿ ಮಾಲತಿಶ್ರೀ ಮೈಸೂರು ದತ್ತಿನಿಧಿ ಪುರಸ್ಕಾರಕ್ಕೆ ಧಾರವಾಡದ ಸುನಂದಾ ಹೊಸಪೇಟೆ ಅವರನ್ನು ಆಯ್ಕೆ ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.