ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಗಣರಾಜ್ಯೋತ್ಸವದ ದಿನ ನಡೆದ ಹಿಂಸಾಚಾರದ ಹಿಂದೆ ಇರುವ ಪಿತೂರಿ ಮತ್ತು ಕ್ರಿಮಿನಲ್ ಕೃತ್ಯವನ್ನು ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರ ವಿಶೇಷ ಘಟಕ, ರೈತ ಸಂಘಟನೆ ಬಿಕೆಯು ವಕ್ತಾರ ರಾಕೇಶ್ ಟಿಕಾಯಿಟ್ ಮತ್ತು ಬೂಟಾ ಸಿಂಗ್ ಬುರ್ಜ್ಗಿಲ್ ಸೇರಿದಂತೆ ಆರು ರೈತ ಮುಖಂಡರಿಗೆ ಸಮನ್ಸ್ ಜಾರಿಗೊಳಿಸಿದೆ.
ದೆಹಲಿ ಪೊಲೀಸರ ಕ್ರೈಂ ಬ್ರಾಂಚ್ ಕಛೇರಿಗೆ ವಿಚಾರಣೆಗೆ ಆಗಮಿಸುವಂತೆ ಸೂಚನೆ ನೀಡಿದೆ.
ದೆಹಲಿ ಪೊಲೀಸರ ವಿಶೇಷ ಘಟಕ ಗಣರಾಜ್ಯೋತ್ಸವದಂದು ರೈತರ ಟ್ರಾಕ್ಟರ್ ಮೆರವಣಿಗೆಯ ಸಂದರ್ಭ ಕೆಂಪು ಕೋಟೆಗೆ ಮುತ್ತಿಗೆ, ಐಟಿಒ, ನಂಗ್ಲೋಯಿ ಕ್ರಾಸಿಂಗ್ ಮತ್ತು ಇತರ ಆರು ಸ್ಥಳಗಳಲ್ಲಿ ನಡೆದ ಹಿಂಸಾಚಾರದ ಪ್ರಕರಣಗಳನ್ನು ತನಿಖೆ ಮಾಡಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಈವರೆಗೆ 33 ಎಫ್ಐಆರ್ಗಳನ್ನು ನೋಂದಾಯಿಸಿದ್ದಾರೆ ಮತ್ತು 44 ಜನರು, ಮುಖ್ಯವಾಗಿ ರೈತ ಮುಖಂಡರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಇವರನ್ನು ದೇಶದಿಂದ ಹೊರಹೋಗದಂತೆ ತಡೆಯಲು ಕ್ರಮಕೈಗೊಳ್ಳಲಾಗಿದೆ. ಬೂಟಾ ಸಿಂಗ್ ಬುರ್ಜ್ಗಿಲ್, ದರ್ಶನ್ ಪಾಲ್ ಸಿಂಗ್, ರಾಕೇಶ್ ಟಿಕಾಯಿಟ್, ಸರವನ್ ಸಿಂಗ್ ಪಾಂಡರ್, ಸತ್ನಮ್ ಪನ್ನು, ಯೋಗೇಂದ್ರ ಯಾದವ್, ಮೇಧಾ ಪಾಟ್ಕರ್, ಲಖಾ ಸಿದ್ಧನಾ, ದೀಪ್ ಸಿಧು, ಜೋಗಿಂದರ್ ಸಿಂಗ್ ಉಗರಾಹಾ, ರಿಷಿಪಾಲ್ ಅಂಬಾವತ, ಬಲ್ಬೀರ್ ಸಿಂಗ್ ರಾಜೇವಾಲ್ ವಿರುದ್ಧ ಲುಕ್ ಔಟ್ ಸರ್ಕ್ಯುಲರ್ ಹೊರಡಿಸಲಾಗಿದೆ.
ದೆಹಲಿ ಪೊಲೀಸರು ಸಮನ್ಸ್ ನೀಡಿರುವ ರೈತರಲ್ಲಿ ಬುಟಾ ಸಿಂಗ್ ಬುರ್ಜ್ಗಿಲ್, ದರ್ಶನ್ ಪಾಲ್ ಸಿಂಗ್, ರಾಕೇಶ್ ಟಿಕೈಟ್, ಸರವನ್ ಸಿಂಗ್ ಪಾಂಡರ್ ಮತ್ತು ಸತ್ನಂ ಪನ್ನು ಮುಂತಾದವರ ಹೆಸರುಗಳಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.