ಜೈಪುರ: ಇಲ್ಲಿನ ರಿಕ್ಷಾ ಚಾಲಕನೋರ್ವನಿಗೆ ರಸ್ತೆ ಮೇಲೆ ಬಿದ್ದಿದ್ದ ಪಾಲಿಥೀನ್ ಚೀಲದಲ್ಲಿ ಲಕ್ಷಾಂತರ ರೂ. ನಗದು ದೊರೆತ ಘಟನೆ ಬೆಳಕಿಗೆ ಬಂದಿದೆ.
ಸುಮಾರು ೧.೧೭ ಲಕ್ಷ ರೂ. ಹಣವಿದ್ದ ಈ ಚೀಲ ಆತನಿಗೆ ದೊರೆತಿದ್ದು, ಮುಸ್ಲಿಮ್ ಆಗಿದ್ದ ಅಬ್ದುಲ್ಖುರೇಷಿಗೆ, ಈ ಹಣವನ್ನು ತಾನು ಪೊಲೀಸರಿಗೆ ಒಪ್ಪಿಸಲು ಹೋದರೆ ತನ್ನ ಮೇಲೆಯೇ ಸಂಶಯಗೊಂಡು ತನ್ನನ್ನು ಬಂಧಿಸಬಹುದೆಂಬ ಭಯ ಹುಟ್ಟಿತ್ತು.
ಆದರೆ ನಂತರ ಹೇಗೋ ದೈರ್ಯ ಮಾಡಿಕೊಂಡು ಪೊಲೀಸರಿಗೆ ಒಪ್ಪಿಸಲು ಹೋದಾಗ ಆತನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಕಳ್ಳ ನೋಟುಗಳನ್ನು ಸಾಗಿಸುತ್ತಿರಬಹುದೆಂದು ಸಂಶಯಗೊಂಡ ಪೊಲೀಸರು ಈ ನೋಟುಗಳನ್ನು ಪರಿಶೀಲಿಸಿ, ಅವು ಚಲಾವಣೆಯಲ್ಲಿರುವ ಕರೆನ್ಸಿ ಎಂದು ಖಚಿತಪಡಿಸಿದ ನಂತರ ಬಿಡುಗಡೆಗೊಳಿಸಿದ್ದಾರೆ.
ಅಬ್ದುಲ್ ಖುರೇಶಿ ಅವರ ಪ್ರಾಮಾಣಿಕತೆಗೆ ಜನ ಭೇಷ್ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.