ಟೋಕಿಯೋ: ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ಟ್ರಾನ್ಸ್ಫಾರ್ಮೇಶನ್ ಕೋಚ್ ನೂಪುರ್ ತಿವಾರಿ ಅವರು ಗಣರಾಜ್ಯೋತ್ಸವ ದಿನದಂದು ಭಾರತದ ಧ್ವಜ ಹಿಡಿದು ಜಪಾನಿನ ಭಾರತೀಯ ರಾಯಭಾರ ಕಛೇರಿಯಿಂದ ಜಪಾನೀಸ್ ಪಾರ್ಲಿಮೆಂಟ್ಗೆ ನಡೆಯಲಿದ್ದಾರೆ.
ಅಂತರರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಪಡೆದ ಮತ್ತು ಪ್ರಶಸ್ತಿ ವಿಜೇತ ಆಂತರಿಕ ಪರಿವರ್ತನೆ ತರಬೇತುಗಾರ್ತಿ, ಆಧ್ಯಾತ್ಮಿಕ ಚಿಕಿತ್ಸಕಿ, ಪ್ರೇರಕ ಭಾಷಣಕಾರ್ತಿ, ಸಮುದಾಯ ಸಬಲೀಕರಣ ತಜ್ಞೆ, ಜಪಾನಿನ ಉತ್ಪಾದಕತೆ ನಿರ್ವಹಣೆಯ ಪರಿಣಿತೆ, ಯೋಗ ಸಲಹೆಗಾರ್ತಿ ಮತ್ತು ಸಮಾಜ ಸೇವಕರಾಗಿರುವ ತಿವಾರಿ ಅವರು, ಗಣರಾಜ್ಯೋತ್ಸವದಂದು ಧ್ವಜ ಹಿಡಿದು ಭಾರತೀಯ ರಾಯಭಾರ ಕಚೇರಿಯಿಂದ ಜಪಾನಿನ ಸಂಸತ್ತಿಗೆ ಭಾರತೀಯರನ್ನು ಕರೆದೊಯ್ಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹೀಲ್ ಟೋಕಿಯೊ ಮತ್ತು ಹೀಲ್ ಇಂಡಿಯಾದ ಸಂಸ್ಥಾಪಕಿಯಾಗಿರುವ ನೂಪುರ್ ಅವರು, ಉದಾಹರಣೆ ನೀಡುವುದಕ್ಕಿಂತ ಉದಾಹರಣೆಯಾಗುವುದನ್ನು ನಂಬುತ್ತಾರೆ.
ಅವರು ತಮ್ಮನ್ನು ಜಪಾನ್ನಲ್ಲಿನ ಭಾರತದ ಅನಧಿಕೃತ ರಾಯಭಾರಿ ಎಂದೂ ಕರೆಯುತ್ತಾರೆ, ಏಕೆಂದರೆ ಅವರ ವಿವಿಧ ಉಪಕ್ರಮಗಳ ಮೂಲಕ ಅವರು ಭಾರತೀಯ ಸಂಸ್ಕೃತಿ ಮತ್ತು ವಿವಿಧ ಚಳುವಳಿಗಳನ್ನು ಜಪಾನಿನಲ್ಲಿ ಉತ್ತೇಜಿಸುತ್ತಾರೆ. ಜನವರಿ 1 ರಂದು, ಅವರು ಬಡವರಿಗೆ ಆಹಾರ ಮತ್ತು ಮುಖಗವಸುಗಳನ್ನು ವಿತರಿಸಲು ಟೋಕಿಯೊದ ಜಪಾನಿನ ನಗರವಾದ ಶಿಂಜಿಕುಗೆ 15 ಕಿ.ಮೀ ನಡಿಗೆಯನ್ನು ಪೂರ್ಣಗೊಳಿಸಿದ್ದರು.
ಭಾರತ ಮತ್ತು ಜಪಾನ್ ನಡುವಿನ ಸ್ನೇಹವನ್ನು ಉತ್ತೇಜಿಸಲು ಅವರು ಜನವರಿ 26 ರ ಗಣರಾಜ್ಯೋತ್ಸವದಂದು ರಸ್ತೆಯನ್ನು ಸ್ವಚ್ಛಗೊಳಿಸಿ ಬಳಿಕ ಭಾರತೀಯ ಧ್ವಜವನ್ನು ಹೊತ್ತು ಭಾರತೀಯ ರಾಯಭಾರ ಕಚೇರಿಯಿಂದ ಜಪಾನಿನ ಸಂಸತ್ತಿಗೆ ಕಾಲಿಡಲು ನಿರ್ಧರಿಸಿದ್ದಾರೆ.
ಜಪಾನ್ನಲ್ಲಿಯೂ ಸ್ವಚ್ಛ ಭಾರತವನ್ನು ಉತ್ತೇಜಿಸಲು ಭಾರತೀಯರ ಮೊದಲ ಪ್ರಯತ್ನ ಇದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.