ಕೋಲ್ಕತ್ತಾ: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125 ನೇ ಜನ್ಮದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ಇಂದು ಕೋಲ್ಕತ್ತಾಗೆ ಭೇಟಿ ನೀಡಿದ್ದು, ಅಲ್ಲಿ ನೇತಾಜೀ ಭವನದಲ್ಲಿ ಗೌರವ ನಮನ ಸಲ್ಲಿಸಿದರು. ‘ಪರಾಕ್ರಮ ದಿನ’ದ ಪ್ರಯುಕ್ತ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
’21 ನೇ ಶತಮಾನದಲ್ಲಿ ನೇತಾಜಿ ಸುಭಾಸ್ ಅವರ ಪರಂಪರೆಯನ್ನು ಪುನಃ ಭೇಟಿ ಮಾಡೋಣ ‘ಎಂಬ ಅಂತರರಾಷ್ಟ್ರೀಯ ಸಮ್ಮೇಳನವನ್ನು ಇಲ್ಲಿ ಅಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ನೇತಾಜಿ ಅವರ ಸ್ಮರಣಾರ್ಥ ಮೋದಿ ಅವರು ಶಾಶ್ವತವಾದ ವಸ್ತುಪ್ರದರ್ಶನ ಮತ್ತು ಪ್ರೊಜೆಕ್ಷನ್ ಮ್ಯಾಪಿಂಗ್ ಪ್ರದರ್ಶನ ಉದ್ಘಾಟನೆ ಮಾಡಿದರು. ನೇತಾಜಿ ಸ್ಮರಣಾರ್ಥ ನಾಣ್ಯ ಮತ್ತು ಅಂಚೆಚೀಟಿ ಬಿಡುಗಡೆ ಮಾಡಿದರು. ನೇತಾಜೀಗೆ ಸಂಬಂಧಿಸಿದ ಪುಸ್ತಕ ಬಿಡುಗಡೆ ಮಾಡಿದರು. ಐಎನ್ಎ ಮಾಜಿ ಯೋಧರಿಗೆ ಸನ್ಮಾನ ಮಾಡಿದರು.
ಈ ವೇಳೆ ಮಾತನಾಡಿದ ಮೋದಿ, “ನೇತಾಜಿಯವರು ನಮಗಾಗಿ ಮತ್ತು ನಿಮಗಾಗಿ ಜೀವನದಲ್ಲಿ ಕಠಿಣ ಸವಾಲು ತೆಗೆದುಕೊಂಡರು. ಅವರು ನಮಗಾಗಿ ಮತ್ತು ನಿಮಗಾಗಿ ಅಮರಣಾಂತ ಉಪವಾಸ ಮಾಡಿದರು. ಅವರು ನಮಗಾಗಿ ಮತ್ತು ನಿಮಗಾಗಿ ತಿಂಗಳುಗಟ್ಟಲೆ ಜೈಲು ಶಿಕ್ಷೆಯನ್ನು ಅನುಭವಿಸಿದರು. ವಿಶ್ವಯುದ್ಧದ ಪರಿಸ್ಥಿತಿಯಲ್ಲಿ, ದೇಶಗಳ ನಡುವೆ ಬದಲಾಗುತ್ತಿದ್ದ ಸಂಬಂಧಗಳ ಮಧ್ಯೆ ಅವರು ಪ್ರತಿ ದೇಶಗಳಿಗೆ ತೆರಳಿ ಭಾರತಕ್ಕೆ ಬೆಂಬಲ ಯಾಚಿಸಿದರು. ಯಾಕೆಂದರೆ, ಭಾರತ ಸ್ವತಂತ್ರವಾಗಬೇಕು, ನಾವು ಮತ್ತು ನೀವು ಸ್ವತಂತ್ರ ಭಾರತದಲ್ಲಿ ಉಸಿರಾಡಬೇಕು ಎಂಬ ಕಾರಣಕ್ಕಾಗಿ”ಎಂದಿದ್ದಾರೆ.
“ಭಾರತದ ಪ್ರತಿಯೊಬ್ಬ ವ್ಯಕ್ತಿ ನೇತಾಜಿ ಅವರಿಗೆ ಋಣಿಯಾಗಿದ್ದಾನೆ. 130 ಕೋಟಿಗೂ ಅಧಿಕ ಭಾರತೀಯರ ಶರೀರದಲ್ಲಿ ಹರಿಯುತ್ತಿರುವ ರಕ್ತದ ಪ್ರತಿಯೊಂದು ಹನಿ ಕೂಡ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಋಣಿಯಾಗಿದೆ” ಎಂದಿದ್ದಾರೆ.
PM Shri @narendramodi pays tribute to Netaji Subhas Chandra Bose at Netaji Bhavan in Kolkata. #ParakramDivas pic.twitter.com/LzaqHVYz11
— BJP (@BJP4India) January 23, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.