ನವದೆಹಲಿ: ಈ ಬಾರಿಯ ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ಅಯೋಧ್ಯೆಯ ರಾಮ ಮಂದಿರದ ಪ್ರತಿರೂಪ ರಾರಾಜಿಸಲಿದೆ.
ಪ್ರಾಚೀನ ನಗರ ಅಯೋಧ್ಯೆಯ ಪರಂಪರೆ, ರಾಮ ಮಂದಿರದ ಪ್ರತಿರೂಪ, ದೀಪೋತ್ಸವ ದರ್ಶನ ಮತ್ತು ರಾಮಾಯಣ ಮಹಾಕಾವ್ಯದ ವಿವಿಧ ಕಥೆಗಳನ್ನು ಉತ್ತರ ಪ್ರದೇಶದ ಟ್ಯಾಬ್ಲೋದಲ್ಲಿ ಇರಲಿದೆ, ಇದನ್ನು ಜನವರಿ 26 ರಂದು ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಪ್ರದರ್ಶಿಸಲಾಗುತ್ತಿದೆ.
ಟ್ಯಾಬ್ಲೋ ಮುಂಭಾಗದಲ್ಲಿ ಮಹರ್ಷಿ ವಾಲ್ಮೀಕಿಯವರನ್ನು ಕುಳಿತುಕೊಳ್ಳುವ ಮಾದರಿಯಲ್ಲಿ ಚಿತ್ರಿಸಲಾಗಿದೆ ಮತ್ತು ದೇವಾಲಯದ ಪ್ರತಿಕೃತಿ ಹಿಂಭಾಗದಲ್ಲಿ ಮಂದಿರ ಪ್ರತಿರೂಪ ಇರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ಅಯೋಧ್ಯೆ ನಮ್ಮ ಪವಿತ್ರ ಸ್ಥಳವಾಗಿದೆ ಮತ್ತು ರಾಮ ಮಂದಿರ ವಿಷಯವು ಭಾರತೀಯರಿಗೆ ಒಂದು ಭಾವನಾತ್ಮಕ ಸಂಗತಿಯಾಗಿದೆ. ನಮ್ಮ ಟ್ಯಾಬ್ಲೋ ಪಟ್ಟಣದ ಪ್ರಾಚೀನ ಪರಂಪರೆಯನ್ನು ಪ್ರದರ್ಶಿಸುತ್ತದೆ, ಇದನ್ನು ದೇಶಾದ್ಯಂತ ಅಸಂಖ್ಯಾತ ಜನರು ಪೂಜಿಸುತ್ತಾರೆ” ಎಂದು ಉತ್ತರ ಪ್ರದೇಶ ಸರ್ಕಾರದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇಬ್ಬರು ಮಹಿಳಾ ನೃತ್ಯಗಾರರು ಸೇರಿದಂತೆ ಕಲಾವಿದರ ಗುಂಪು ಟ್ಯಾಬ್ಲೋ ಭಾಗವಾಗಲಿದ್ದು, ಒಬ್ಬ ವ್ಯಕ್ತಿ ಭಗವಾನ್ ರಾಮನ ವೇಷ ಧರಿಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.