ಹರಿದ್ವಾರ: ಪ್ರಸ್ತುತ ನಡೆಯತ್ತಿರುವ ಮಹಾ ಕುಂಭಮೇಳದಲ್ಲಿ ಭಕ್ತರು ಮತ್ತು ಪ್ರವಾಸಿಗರಿಗೆ ಭಾರತದ ಪರಂಪರೆಯ ಮಹತ್ವದ ಬಗ್ಗೆ ಅರಿವು ಮೂಡಿಸಲು ಹರಿದ್ವಾರದಲ್ಲಿ ಗೋಡೆಗಳನ್ನು ಭಾರತೀಯ ಇತಿಹಾಸ ವಿಷಯದ ವರ್ಣರಂಜಿತ ಚಿತ್ರಗಳಿಂದ ಅಲಂಕೃತಗೊಳಿಲಾಸಲಾಗಿದೆ.
ಹರಿದ್ವಾರ-ರೂರ್ಕಿ ಅಭಿವೃದ್ಧಿ ಪ್ರಾಧಿಕಾರವು ನಡೆಸುತ್ತಿರುವ “ಪೇಂಟ್ ಮೈ ಸಿಟಿ” ಎಂಬ ಅಭಿಯಾನದಡಿಯಲ್ಲಿ ಗೋಡೆಗಳನ್ನು ಸುಂದರಗೊಳಿಸಲಾಗುತ್ತಿದೆ. ಸಾಂಸ್ಕೃತಿಕ-ಕಲಾತ್ಮಕ ಕೃತಿಗಳಿಂದ ನಗರ ಅಲಂಕೃತಗೊಂಡಿದೆ ಜನಮನ ಸೋರೆಗೊಂಡಿದೆ.
“ಪ್ರಯಾಗರಾಜ್ ಅರ್ಧ ಕುಂಭಮೇಳ 2019 ರ ಸಮಯದಲ್ಲಿ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರು ಮಾಡಿದಂತೆ ಆಡಳಿತವು ನಗರವನ್ನು ಅಲಂಕರಿಸಿದೆ. ಇದು ಜನರ ಭಾವನೆ ಮತ್ತು ನಂಬಿಕೆಯನ್ನು ಬೆಳೆಸುತ್ತದೆ. ಹೃದಯಗಳನ್ನು ಬೆಸೆಯುತ್ತದೆ. ಅಂತಹ ವರ್ಣಚಿತ್ರಗಳು ಧಾರ್ಮಿಕ ಶಕ್ತಿ ಮತ್ತು ಜನರಲ್ಲಿ ನಂಬಿಕೆಯನ್ನು ಉಂಟುಮಾಡುತ್ತವೆ. ಕುಂಭದ ಮುಕ್ತಾಯದ ನಂತರವೂ ಇಂತಹ ಕಲಾತ್ಮಕ ಕಾರ್ಯಗಳು ಇಲ್ಲಿಯೇ ಇರಬೇಕೆಂದು ನಾನು ಬಯಸುತ್ತೇನೆ. ಇದಕ್ಕಾಗಿ ಹರಿದ್ವಾರ – ರೂರ್ಕಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಅಭಿನಂದನೆಗಳು” ಎಂದು ನಿರಂಜನಿ ಅಖಾಡದ ಆಚಾರ್ಯ ಕೈಲಾಸನಂದ್ ಗಿರಿ ಹೇಳಿದ್ದಾರೆ.
ಕುಂಭವನ್ನು ಬಣ್ಣಗಳ ಹಬ್ಬವೆಂದು ಬಣ್ಣಿಸಿದ ಮೇಳ ಉಪ ಅಧಿಕಾರಿ ಹರ್ಬೀರ್ ಸಿಂಗ್, ಹಿಂದೂ ಪುರಾಣ ಮತ್ತು ಉತ್ತರಾಖಂಡ ಸಂಸ್ಕೃತಿಯನ್ನು ಚಿತ್ರಿಸುವ ಪೇಟಿಂಗ್ ಗೋಡೆಗಳು, ಸೇತುವೆಗಳು, ಸರ್ಕಾರಿ ಕಟ್ಟಡಗಳು ಮತ್ತು ಹರಿದ್ವಾರದಲ್ಲಿ ಲಭ್ಯವಿರುವ ಇತರ ಸ್ಥಳಗಳಲ್ಲಿ ಮೂಡಿವೆ ಎಂದು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.