ನವದೆಹಲಿ: ಸಿಖ್ಖರ 10ನೇ ಧರ್ಮ ಗುರು ಗುರು ಗೋವಿಂದ್ ಸಿಂಗ್ ಅವರ ಜನ್ಮದಿನವನ್ನು ಇಂದು ಅಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೌರವಾರ್ಪಣೆ ಮಾಡಿದ್ದಾರೆ.
ಟ್ವಿಟ್ ಮಾಡಿರುವ ಮೋದಿ, “ಗುರು ಸಾಹಿಬ್ ನನ್ನ ಮೇಲೆ ವಿಶೇಷ ಕೃಪೆಯನ್ನು ಹೊಂದಿದ್ದಾರೆ, ಯಾಕೆಂದರೆ ಶ್ರೀ ಗುರು ಗೋಬಿಂದ್ ಸಿಂಗ್ ಜಿ ಅವರ 350 ನೇ ಪ್ರಕಾಶ್ ಪುರಬ್ ನಮ್ಮ ಸರ್ಕಾರದ ಅವಧಿಯಲ್ಲಿ ನಡೆದಿದೆ. ಪಾಟ್ನಾದಲ್ಲಿ ನಡೆದ ಅದ್ಧೂರಿ ಆಚರಣೆಗಳನ್ನು ನಾನು ನೆನಪಿಸಿಕೊಳ್ಳುತ್ತೇನೆ, ಅಲ್ಲಿಗೆ ಹೋಗಿ ನನಗೆ ಗೌರವ ಸಲ್ಲಿಸುವ ಅವಕಾಶವೂ ಸಿಕ್ಕಿತ್ತು” ಎಂದಿದ್ದಾರೆ.
ಗುರು ಗೋವಿಂದ್ ಸಿಂಗ್ ಅವರು ಅನ್ಯಾಯ ಮತ್ತು ಶೋಷಣೆಯ ವಿರುದ್ದ ಹೋರಾಡಿದ ತತ್ವಜ್ಞಾನಿ, ಜನರ ಸಂಕಷ್ಟವನ್ನು ನಿವಾರಣೆ ಮಾಡುವುದೇ ಅತ್ಯಂತ ದೊಡ್ಡ ಸೇವೆ ಎಂದು ಪ್ರತಿಪಾದಿಸಿದ ಸಿಖ್ಖ್ ಪಂಥದ 10 ನೇ ಧರ್ಮಗುರು.
ತಮ್ಮ ತಂದೆ ಗುರು ತೇಜ್ ಬಹದ್ದೂರ್ರ ಉತ್ತರಾಧಿಕಾರಿಯಾಗಿ 11 ನವೆಂಬರ್ 1675ರಂದು ತನ್ನ ಒಂಬತ್ತು ವರ್ಷಗಳ ವಯಸ್ಸಿನಲ್ಲೇ ಗುರುವಾದರು. ಅವರು ವೀರಯೋಧ, ಕವಿ ಹಾಗೂ ತತ್ವ ಜ್ಞಾನಿ ಮಾತ್ರವಲ್ಲದೇ ಸಿಖ್ ಮತ/ಧರ್ಮದ ನಾಯಕರಾಗಿದ್ದರು. ಗುರು ಗೋಬಿಂದ್ ಸಿಂಗ್ರು ಮಾನವತ್ವಕ್ಕೆ ಒಂದು ಪರಿಪೂರ್ಣ ಉದಾಹರಣೆಯಾಗಿದ್ದರು. ಉನ್ನತ ಶಿಕ್ಷಣ ಪಡೆದಿದ್ದ, ಕುದುರೆ ಸವಾರಿಯಲ್ಲಿ ನಿಷ್ಣಾತರಾಗಿದ್ದ, ಶಸ್ತ್ರಾಸ್ತ್ರಸಜ್ಜಿತ ಹೋರಾಟದಲ್ಲಿ ಪರಿಣಿತರಾಗಿದ್ದರು. ಮೊಘಲರ ವಿರುದ್ಧ ಸೆಟೆದು ನಿಂತ ವೀರನೂ ಆಗಿದ್ದರು.
The Guru Sahibs have a special Kripa on me that the 350th Parkash Purab of Sri Guru Gobind Singh Ji took place during the tenure of our Government. I recall the grand celebrations in Patna, where I also had the opportunity to go and pay my respects. pic.twitter.com/BNElOBj8hk
— Narendra Modi (@narendramodi) January 20, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.