ನವದೆಹಲಿ: ಉತ್ತರಪ್ರದೇಶ ಗೋರಖ್ಪುರದ ಸಿಬಿಎಸ್ಇ ಟಾಪರ್ ಆಗಿರುವ ದಿವ್ಯಾಂಗಿ ತ್ರಿಪಾಠಿ ಅವರನ್ನು ದೆಹಲಿಯ ಗಣರಾಜ್ಯೋತ್ಸವ ಪೆರೇಡ್ ವೀಕ್ಷಣೆಗೆ ಆಹ್ವಾನಿಸಲಾಗಿದೆ.
ಪಿಎಂ ಬಾಕ್ಸ್ನಲ್ಲಿ ಕುಳಿತು ರಿಪಬ್ಲಿಕ್ ಡೇ ಪೆರೇಡ್ 2021 ಅನ್ನು ವೀಕ್ಷಿಸಲು ಆಹ್ವಾನಿಸುವ ಅವರಿಗೆ ಸಿಗಲಿದೆ. ಕಳೆದ ವರ್ಷ 12 ನೇ ತರಗತಿಯಲ್ಲಿ 99.6% ಅಂಕಗಳನ್ನು ಗಳಿಸಿ ಜಿಲ್ಲೆಯಲ್ಲಿ ಅಗ್ರಸ್ಥಾನ ಪಡೆದ ದಿವ್ಯಾಂಗಿ, ಈ ಗಣರಾಜ್ಯೋತ್ಸವದಂದು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮೆರವಣಿಗೆಯನ್ನು ವೀಕ್ಷಿಸಲು ಆಹ್ವಾನಿಸಲಾದ ಇತರ ಪ್ರತಿಭಾನ್ವಿತ ವಿದ್ಯಾರ್ಥಿಗಳಲ್ಲಿ ಒಬ್ಬರು.
ದಿವ್ಯಾಂಗಿಯ ಕುಟುಂಬವು ಜನವರಿ 13 ರಂದು ಆಹ್ವಾನವನ್ನು ಸ್ವೀಕರಿಸಿದೆ, ಈ ವೇಳೆ ಅವರು ಸಂತೋಷಕ್ಕೆ ಪಾರವೇ ಇರಲಿಲ್ಲ. ಈ ಆಹ್ವಾನ ನಿಜಕ್ಕೂ ಹೆಮ್ಮೆ ಪಡುವಂತಹ ಸಾಧನೆಯಾಗಿದೆ. ದಿವ್ಯಾಂಗಿಗೆ, ಇದು ಆಕೆಯ ಕಠಿಣ ಪರಿಶ್ರಮ ಮತ್ತು ದೃಢನಿಶ್ಚಯಕ್ಕೆ ಸಿಕ್ಕ ಫಲವಾಗಿದೆ.
ದಿವ್ಯಾಂಗಿ ಜಿಲ್ಲೆಯಲ್ಲಿ ಅಗ್ರಸ್ಥಾನ ಪಡೆದಿರುವುದು ಮಾತ್ರವಲ್ಲ, ಜೀವಶಾಸ್ತ್ರದಲ್ಲಿ ದೇಶದಲ್ಲಿ ಎರಡನೇ ಶ್ರೇಯಾಂಕ ಗಳಿಸಿದ್ದಾರೆ. ಈ ವರ್ಷ ಮೆರವಣಿಗೆಗೆ ಸಾಕ್ಷಿಯಾಗಲು ಅವಳು ಮತ್ತು ಇತರ ಅನೇಕ ಟಾಪರ್ ವಿದ್ಯಾರ್ಥಿಗಳನ್ನು ಆಹ್ವಾನಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.