ನವದೆಹಲಿ: ಮುಂಬೈನ ಎಸ್ಪ್ಲನೇಡ್ ನ್ಯಾಯಾಲಯವು ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅವರ ಅಳಿಯ ಸಮೀರ್ ಖಾನ್ ಅವರನ್ನು ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ 14 ದಿನಗಳ ನ್ಯಾಯಾಂಗ ಕಸ್ಟಡಿಗೆ ಕಳುಹಿಸಿದೆ. ಈ ಹಿಂದೆ ಸಮೀರ್ ಖಾನ್ ಅವರನ್ನು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯಲಾಗಿತ್ತು. ಮಾದಕವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಜನವರಿ 13 ರಂದು ಸಮೀರ್ ಖಾನ್ ಅವರನ್ನು ಬಂಧಿಸಿತ್ತು.
ಜನವರಿ 13 ರಂದು, ಸಮೀರ್ ಖಾನ್ ಅವರನ್ನು ಎನ್ಸಿಬಿ ವಶಕ್ಕೆ ತೆಗೆದುಕೊಂಡಿತು ಮತ್ತು ಅದರ ನಂತರ ಅವರು ಉಲ್ಲೇಖಿಸಿದ ಹಲವಾರು ಸ್ಥಳಗಳಲ್ಲಿ ದಾಳಿ ನಡೆಸಲಾಯಿತು. ಬಾಂದ್ರಾದ ಸಮೀರ್ ಖಾನ್ ಅವರ ನಿವಾಸದಲ್ಲಿ ದಾಳಿ ನಡೆಸಲಾಯಿತು. ಡ್ರಗ್ಸ್ ಪ್ರಕರಣದಲ್ಲಿ ಸಮೀರ್ ಖಾನ್ ಹೆಸರು ಕೇಳಿ ಬಂದ ನಂತರ, ನವಾಬ್ ಮಲಿಕ್ ನಾವು ಯಾರೂ ಕಾನೂನಿಗೆ ಮೀರಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಮಲಿಕ್ ಅವರ ಅಳಿಯನನ್ನು ದಕ್ಷಿಣ ಮುಂಬಯಿಯ ಬಲ್ಲಾರ್ಡ್ ಎಸ್ಟೇಟ್ನಲ್ಲಿರುವ ಎನ್ಸಿಬಿ ಕಚೇರಿಗೆ ವಿಚಾರಣೆಗೆ ಕರೆಸಲಾಯಿತು ಎಂದು ಕೇಂದ್ರ ಏಜೆನ್ಸಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬೆಳಿಗ್ಗೆ 10 ಗಂಟೆ ಸುಮಾರಿಗೆ ಖಾನ್ ಅಲ್ಲಿಗೆ ಬಂದರು ಮತ್ತು ಹಲವಾರು ಗಂಟೆಗಳ ವಿಚಾರಣೆಯ ನಂತರ ಅವರನ್ನು ಬಂಧಿಸಲಾಯಿತು.
ಮುಂಬೈನ ಪ್ರಸಿದ್ಧ ‘ಮುಚಾದ್ ಪಾನ್ವಾಲಾ’ ಅಂಗಡಿಯ ಮಾಲೀಕರಲ್ಲಿ ಒಬ್ಬರಾದ ರಾಮ್ಕುಮಾರ್ ತಿವಾರಿ ಅವರನ್ನೂ ಏಜೆನ್ಸಿ ಮಂಗಳವಾರ ಬಂಧಿಸಿದೆ.
ಡ್ರಗ್ಸ್ ಪ್ರಕರಣವೊಂದರಲ್ಲಿ ಆತನ ಮತ್ತು ಓರ್ವ ಆರೋಪಿಗಳ ನಡುವೆ ಆನ್ಲೈನ್ ವಹಿವಾಟು ನಡೆಸಲಾಗಿದೆ ಎಂದು ತಿಳಿದುಬಂದ ನಂತರ ಆತನನ್ನು ವಿಚಾರಣೆಗೆ ಕರೆಸಲಾಯಿತು, ಇದರಲ್ಲಿ ಬ್ರಿಟಿಷ್ ನಾಗರಿಕ ಕರಣ್ ಸಜ್ನಾನಿ ಮತ್ತು ಇತರ ಇಬ್ಬರು ಕಳೆದ ವಾರ 200 ಕೆಜಿ ಡ್ರಗ್ಸ್ ಗಳೊಂದಿಗೆ ಬಂಧಿಸಲ್ಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಳೆದ ವಾರ ಎನ್ಸಿಬಿ ಕರಣ್ ಸಜ್ನಾನಿ ಸೇರಿದಂತೆ ಮೂವರನ್ನು ಬಂಧಿಸಿ ಖಾರ್ ಮತ್ತು ಬಾಂದ್ರಾ ಪ್ರದೇಶಗಳಿಂದ 200 ಕೆಜಿ ಡ್ರಗ್ಸ್ ಗಳನ್ನು ವಶಪಡಿಸಿಕೊಂಡಿದೆ ಎಂದು ಹೇಳಿಕೊಂಡಿದೆ.
ಡ್ರಗ್ಸ್ಗಳಲ್ಲಿ ಗಂಜಾ, ಆಮದು ಮಾಡಿಕೊಂಡ ‘ಒಜಿ ಕುಶ್’ (ಗಾಂಜಾ ಇಂಡಿಕಾದ ಸ್ಟ್ರೈನ್), ಮತ್ತು ಕ್ಯುರೇಟೆಡ್ ಗಾಂಜಾ ಸೇರಿವೆ, ಅವುಗಳಲ್ಲಿ ಕೆಲವು ಯುಎಸ್ ನಿಂದ ಬಂದವು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.