ನವದೆಹಲಿ : ದೇಶದ ಕ್ರೀಡಾಕ್ಷೇತ್ರದ ದಿಗ್ಗಜ ನಾಯಕರಿಗೆ ಗೌರವ ಸೂಚಿಸುವ ಸಲುವಾಗಿ, ಕೇಂದ್ರ ಕ್ರೀಡಾ ಸಚಿವಾಲಯ ಭಾರತೀಯ ಕ್ರೀಡಾ ಪ್ರಾಧಿಕಾರ ನಿರ್ಮಿಸಲಿರುವ ಎಲ್ಲ ಕ್ರೀಡಾ ಸೌಕರ್ಯ ಮತ್ತು ಉನ್ನತೀಕರಿಸುವ ಎಲ್ಲ ಕ್ರೀಡಾ ಸೌಕರ್ಯಗಳಿಗೆ ಭಾರತದಲ್ಲಿ ಕ್ರೀಡೆಗೆ ಕೊಡುಗೆ ನೀಡಿದ ಗಣ್ಯರ ಹೆಸರುಗಳನ್ನಿಡಲು ತೀರ್ಮಾನಿಸಿದೆ.
ಮೊದಲಿಗೆ ಲಖನೌದಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಹವಾನಿಯಂತ್ರಿತ ಕುಸ್ತಿ ತರಬೇತಿ ಕೋಣೆ ಮತ್ತು ರಾಷ್ಟ್ರೀಯ ಶ್ರೇಷ್ಠತಾ ಕೇಂದ್ರದ (ಎನ್ ಸಿಒಇ)ನ ಈಜು ತರಬೇತಿ ಕೊಳ, ಭೂಪಾಲ್ನಲ್ಲಿ ನಿರ್ಮಿಸಿರುವ 100 ಹಾಸಿಗೆಗಳ ಎನ್ ಸಿಒಇ ಹಾಸ್ಟೆಲ್, ಸೋನ್ ಪೇಟೆಯ ಎನ್ ಸಿಒಇ ಬಾಲಕಿಯರ ಹಾಸ್ಟೆಲ್, ಗೌವಾಹಟಿಯ ಹೊಸ ಎಸ್ ಟಿಸಿ ಮತ್ತು ಹಾಸ್ಟೆಲ್, ಬಹು ಉದ್ದೇಶದ ಸಭಾಂಗಣ ಮತ್ತು ಸಿಬ್ಬಂದಿ ಕ್ವಾರ್ಟಸ್ಗಳಿಗೆ ಸ್ಥಳೀಯ ಕ್ರೀಡಾ ತಾರೆಗಳ ಹೆಸರುಗಳನ್ನಿಡಲಾಗುವುದು.
ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಕಿರಣ್ ರಿಜಿಜು “ದೇಶದಲ್ಲಿ ಕ್ರೀಡಾ ಸಂಸ್ಕೃತಿಯನ್ನು ನಿರ್ಮಿಸಲು, ನಮ್ಮ ಕ್ರೀಡಾವ್ಯಕ್ತಿಗಳಿಗೆ ಅವರು ಅರ್ಹರಿರುವಷ್ಟು ಗೌರವವನ್ನು ಸಲ್ಲಿಸಬೇಕಾಗಿದೆ, ಹಾಗಾದಾಗ ಮಾತ್ರ ಯುವ ಪೀಳಿಗೆ ಕ್ರೀಡೆಯನ್ನು ವೃತ್ತಿಯನ್ನಾಗಿ ತೆಗೆದುಕೊಳ್ಳಲು ಆಸಕ್ತಿ ತೋರುತ್ತಾರೆ. ಸರ್ಕಾರ ಈಗಾಗಲೇ ಹಾಲಿ ಕ್ರೀಡಾಕ್ಷೇತ್ರದಲ್ಲಿರುವವರಿಗೆ ಹಾಗೂ ಹಿಂದಿನ ಅಥ್ಲೀಟ್ ಗಳಿಗೆ ಗೌರವದಿಂದ ಹಾಗೂ ಸುಗಮವಾಗಿ ಬಾಳ್ವೆ ನಡೆಸುವಂತಾಗಲು ಎಲ್ಲ ರೀತಿಯ ನೆರವನ್ನು ನೀಡುತ್ತಿದೆ. ಕ್ರೀಡಾ ಸಾಧಕರನ್ನು ಗುರುತಿಸಿ ಕ್ರೀಡಾ ಸೌಕರ್ಯಗಳಿಗೆ ಅವರುಗಳ ಹೆಸರು ನಾಮಕರಣ ಮಾಡುವುದು, ಸರ್ಕಾರ ಕ್ರೀಡಾವ್ಯಕ್ತಿಗಳ ಬಲವರ್ಧನೆಗೆ ಬದ್ಧವಾಗಿದೆ ಎಂಬುದನ್ನು ತೋರಿಸುವ ಬದ್ಧತೆಯ ಪ್ರಯತ್ನವಾಗಿದೆ’’ ಎಂದಿದ್ದಾರೆ.
PM @NarendraModi Ji has provided huge support to sports & respect to sportspersons. Therefore, Sports Ministry had taken a decision last year to name all sports facilities & hostels of SAI after eminent athletes. The entire exercise is almost complete and will start naming soon. pic.twitter.com/8BlvZiAZGl
— Kiren Rijiju (@KirenRijiju) January 17, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.