ನವದೆಹಲಿ: ದೆಹಲಿಯ ಏಮ್ಸ್ನ ಸ್ವಚ್ಛತಾ ಕಾರ್ಮಿಕ ಮನೀಶ್ ಕುಮಾರ್ ಅವರು ಇಂದು ಕೊರೋನಾವೈರಸ್ ವಿರುದ್ಧ ಲಸಿಕೆ ಪಡೆದ ದೇಶದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆರೋಗ್ಯ ಕಾರ್ಯಕರ್ತ ಧವಲ್ ದ್ವಿವೇದಿ ಲಸಿಕೆ ಪಡೆದ ಎರಡನೇ ವ್ಯಕ್ತಿಯಾಗಿದ್ದಾರೆ. ಏಮ್ಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಮತ್ತು ನೀತಿ ಆಯೋಗದ ಹಿರಿಯ ಸದಸ್ಯ ಡಾ.ವಿ.ಕೆ. ಪೌಲ್ ನಂತರ ಲಸಿಕೆ ಪಡೆದವರಾಗಿದ್ದಾರೆ.
“ನಾನು ಬಹಳ ಒಳ್ಳೆಯ ಅನುಭವ ಪಡೆದೆ. ಲಸಿಕೆ ಪಡೆಯಲು ನಾನು ಹಿಂಜರಿಯಲಿಲ್ಲ. ಜನರು ಚಿಂತಿಸಬೇಕಾಗಿಲ್ಲ. ಈಗ ಲಸಿಕೆ ಬಗ್ಗೆ ನನಗೆ ಯಾವುದೇ ಅನುಮಾನಗಳಿಲ್ಲ. ಎಲ್ಲರೂ ಲಸಿಕೆಯನ್ನು ಪಡೆಯಬೇಕು” ಎಂದು ಮನೀಶ್ ಹೇಳಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಿಶ್ವದ ಅತಿದೊಡ್ಡಲಸಿಕೆ ಅಭಿಯಾನವನ್ನು ಇಂದು ಪ್ರಾರಂಭಿಸಿದ್ದಾರೆ. ಆ ಬಳಿಕ ದೇಶವ್ಯಾಪಿ ಕೊರೋನಾ ಯೋಧರಿಗೆ ಲಸಿಕೆ ನೀಡಲಾಯಿತು. ಸುಮಾರು 3 ಲಕ್ಷ ಮಂದಿ ಇಂದು ಲಸಿಕೆ ಪಡೆಯಲಿದ್ದಾರೆ.
“ಈ ಲಸಿಕೆಗಳು ಸಾಂಕ್ರಾಮಿಕ ರೋಗದ ವಿರುದ್ಧದ ನಮ್ಮ ಹೋರಾಟದಲ್ಲಿ ನಮ್ಮ ‘ಸಂಜೀವಿನಿ’ . ನಾವು ಪೋಲಿಯೊ ವಿರುದ್ಧದ ಯುದ್ಧವನ್ನು ಗೆದ್ದಿದ್ದೇವೆ ಮತ್ತು ಈಗ ನಾವು ಕೋವಿಡ್ ವಿರುದ್ಧದ ಯುದ್ಧವನ್ನು ಗೆಲ್ಲುವ ನಿರ್ಣಾಯಕ ಹಂತವನ್ನು ತಲುಪಿದ್ದೇವೆ. ಈ ದಿನ ನಾನು ಎಲ್ಲಾ ಮುಂಚೂಣಿ ಕಾರ್ಯಕರ್ತರನ್ನು ಅಭಿನಂದಿಸಲು ಬಯಸುತ್ತೇನೆ ” ಸಚಿವ ಡಾ.ಹರ್ಷವರ್ಧನ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.