ಕುವೈತ್: ವಿವೇಕಾನಂದ ಜಯಂತಿಯ ಪ್ರಯುಕ್ತ ಭಾರತೀಯ ಪ್ರವಾಸಿ ಪರಿಷತ್ ಕುವೈತ್ ಕರ್ನಾಟಕ ಘಟಕ ಹಮ್ಮಿಕೊಂಡಿರುವ ʼಅನಿವಾಸಿ ಕನ್ನಡಿಗರೊಂದಿಗೆ ಜೀವನ ಸಂದೇಶʼ ಕಾರ್ಯಕ್ರಮ ಜ. 15 ರಂದು ನಡೆಯಲಿದೆ.
ಫೇಸ್ಬುಕ್ ಲೈವ್ ಮೂಲಕ ಈ ಕಾರ್ಯಕ್ರಮ ನಡೆಯಲಿದ್ದು, ಅವಧೂತ ಶ್ರೀ ವಿನಯ ಗುರೂಜಿ ಅವರು ‘ಅನಿವಾಸಿ ಕನ್ನಡಿಗರೊಂದಿಗೆ ಜೀವನ ಸಂದೇಶ’ ಎಂಬ ವಿಷಯದ ಬಗ್ಗೆ ಮಾತನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಾ ಅರ್ಪಿತಾ ಕೃಷ್ಣ, ಲೆಫ್ಟಿನೆಂಟ್ ಕರ್ನಲ್ ಅಶೋಕ್ ಕಿಣಿ ಭಾಗವಹಿಸಲಿದ್ದಾರೆ.
ಪ್ರವಾಸಿ ಪರಿಷತ್ತು ಕುವೈತ್ ಕರ್ನಾಟಕ ಘಟಕವು ಅನೇಕ ಕಾರ್ಯಕ್ರಮಗಳನ್ನು ಅನೇಕ ವರ್ಷಗಳಿಂದ ಆಯೋಜನೆ ಮಾಡುತ್ತಲೇ ಬಂದಿದೆ. ಭಾರತೀಯರಲ್ಲಿ ರಾಷ್ಟ್ರ ಭಕ್ತಿ ಹಾಗೂ ನಮ್ಮ ಧಾರ್ಮಿಕತೆ ಸಂಸ್ಕೃತಿ ಇವುಗಳನ್ನು ಎತ್ತಿಹಿಡಿಯುವಂತಹ ಅನೇಕ ಕಾರ್ಯಕ್ರಮಗಳನ್ನು ಸತತವಾಗಿ ಹಮ್ಮಿಕೊಳ್ಳುತ್ತಿದೆ.
ಪರಿಷತ್ ವತಿಯಿಂದ ರಕ್ತದಾನ ಶಿಬಿರ ಸೇರಿದಂತೆ ಸಮಾಜಕ್ಕೆ ಪೂರಕವಾದಂತಹ ಅನೇಕ ಕಾರ್ಯ ಚಟುವಟಿಕೆಗಳನ್ನು ನಿರಂತರವಾಗಿ ನಡೆಯುತ್ತಿರುವುದಾಗಿಯೂ ಆಯೋಜಕರು ಮಾಹಿತಿ ನೀಡಿದ್ದಾರೆ.
ಕಾರ್ಯಕ್ರಮ ನಡೆಯುವ ಸಮಯ, ಸಂಜೆ 6-8 ಭಾರತೀಯ ಕಾಲಮಾನ (ಮಧ್ಯಾಹ್ನ 3.30 ರಿಂದ 5.30- ಕುವೈತ್ ಕಾಲಮಾನ)
ಕಾರ್ಯಕ್ರಮವನ್ನು ಅವಧೂತ ಫೇಸ್ಬುಕ್ ಪೇಜ್, BPP Kuwait Karnataka wing Facebook page ನಲ್ಲಿ , ಝೂಮ್ ಮೀಟಿಂಗ್ನಲ್ಲಿ ವೀಕ್ಷಿಸಬಹುದಾಗಿದೆ ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.