ತ್ರಿಶೂರ್: ಕೇರಳದ ತ್ರಿಶೂರ್ನ ಸಮುದ್ರದಲ್ಲಿ ಮುಳುಗುತ್ತಿದ್ದ ನಾಲ್ವರು ಮೀನುಗಾರರನ್ನು ಪತ್ತೆ ಹಚ್ಚಿ ರಕ್ಷಿಸುವಲ್ಲಿ 19 ವರ್ಷದ ಕಾಲೇಜು ವಿದ್ಯಾರ್ಥಿ ಮತ್ತು ಡ್ರೋನ್ ಪೈಲಟ್ ದೇವಾಂಗ್ ಸುಬಿಲ್ ಯಶಸ್ವಿಯಾಗಿದ್ದಾನೆ. ತನ್ನ ಡ್ರೋನ್ ಜೊತೆಗೆ ಸರಿಯಾದ ಸಮಯದಲ್ಲಿ ದಡಕ್ಕೆ ತಲುಪಿದ ದೇವಾಂಗ್ ಸುಬಿಲ್ ಮೀನುಗಾರರ ರಕ್ಷಣಾ ಕಾರ್ಯದಲ್ಲಿ ಸೇರಿಕೊಂಡು, ಪ್ರತಿಕೂಲ ಪರಿಸ್ಥಿತಿಗಳ ಮಧ್ಯೆ ನಾಲ್ಕು ಜೀವಗಳನ್ನು ಉಳಿಸಲು ಸಹಾಯ ಮಾಡಿದ್ದಾನೆ.
ನಾಲ್ಕು ಮೀನುಗಾರರನ್ನು ಕರೆದೊಯ್ಯುತ್ತಿದ್ದ ದೋಣಿ ಮಂಗಳವಾರ ಹೆಚ್ಚಿನ ಉಬ್ಬರವಿಳಿತದ ಮಧ್ಯೆ ಹಾನಿಗೊಳಗಾಗಿ ನಂತರ ಮುಳುಗಿದೆ ಎಂದು ಹೇಳಲಾಗಿದೆ.
80 ಕ್ಕೂ ಹೆಚ್ಚು ಸ್ಥಳೀಯ ಮೀನುಗಾರರರು ನಡೆಸಿದ ರಕ್ಷಣಾ ಪ್ರಯತ್ನಗಳು ಮುಂಜಾನೆ 4 ಗಂಟೆಗೆ ಪ್ರಾರಂಭವಾದವು ಎಂದು ಹೇಳಲಾಗುತ್ತದೆ, ಆದರೆ ಇವೆಲ್ಲವೂ ವ್ಯರ್ಥವಾಯಿತು.
ಥಾಲಿಕುಲಂ ಗ್ರಾಮದಲ್ಲಿ ಈ ಘಟನೆಯ ಸುದ್ದಿ ಹರಡುತ್ತಿದ್ದಂತೆ, ದೇವಾಂಗ್ ಸುಬಿಲ್ ಬೆಳಿಗ್ಗೆ 11 ಗಂಟೆಗೆ ಡ್ರೋನ್ ಜೊತೆಗೆ ದಡಕ್ಕೆ ತಲುಪಿದ್ದಾನೆ. ಅಲ್ಲಿ ಸುಮಾರು 500 ಮಂದಿ ನೆರೆದಿದ್ದರು, ಅದರೆ ಯಾರೊಬ್ಬರಿಗೂ ನಾಲ್ವರು ಮೀನುಗಾರರು ರಕ್ಷಿಸಲ್ಪಡುತ್ತಾರೆ ಎಂಬ ಭರವೆ ಇರಲಿಲ್ಲ.
ಬಿಟೆಕ್ ವಿದ್ಯಾರ್ಥಿಯಾಗಿರುವ ದೇವಾಂಗ್ ಸ್ಥಳೀಯ ಅಧಿಕಾರಿಗಳ ಅನುಮತಿಯೊಂದಿಗೆ ಮೀನುಗಾರರ ದೋಣಿಯಲ್ಲಿ ಕೂತು ಸಮುದ್ರತ್ತ ಪ್ರಯಾಣಿಸಿ ತನ್ನ ಡ್ರೋನ್ ಮೂಲಕ ಮೀನುಗಾರರ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸಿದನು.
ಸಮುದ್ರದಲ್ಲಿ 15 ಕಿ.ಮೀ ಮುಂದೆ ಹೋಗಿ ಸುಬಿಲ್ ತನ್ನ ಸ್ಮಾರ್ಟ್ ಫೋನ್ ಆನ್ ಮಾಡಿ, ಹಾಗೆಯೇ ತನ್ನ ಡ್ರೋನ್ ಅನ್ನು ಹಾರಿಸುತ್ತಾನೆ. ಇದರಿಂದ ಒಬ್ಬ ಮೀನುಗಾರ ಪತ್ತೆಯಾದ ಮತ್ತು ಅವನ ರಕ್ಷಣೆಗೆ ಮಾಡಲಾಯಿತು. ಈತ ನೀಡಿದ ಮಾಹಿತಿಯ ಮೂಲಕ ಇತರ ಮೂವರನ್ನು ರಕ್ಷಣೆ ಮಾಡಲಾಯಿತು.
ಮಿನುಗಾರರನ್ನು ರಕ್ಷಿಸುವಲ್ಲಿ ಮಹತ್ವದ ಪಾತ್ರ ನಿಭಾಯಿಸಿದ ಸುಬಿಲ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.