ನವದೆಹಲಿ: ಭಾರತ ಮತ್ತು ಬಾಂಗ್ಲಾದೇಶದ ನಡುವಣ ದ್ವಿಪಕ್ಷೀಯ ಸಂಬಂಧ ಆಳವಾಗುತ್ತಿದ್ದು, ಬಾಂಗ್ಲಾ ಸೇನೆಯ ನಿಯೋಗವು ಜನವರಿ 26 ರಂದು ನವದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಭಾಗವಹಿಸುತ್ತಿದೆ ಎಂದು ಮೂಲಗಳು ವರದಿ ಮಾಡಿವೆ.
1971 ರ ಯುದ್ಧದಲ್ಲಿ ಪಾಕಿಸ್ಥಾನದ ವಿರುದ್ಧ ಭಾರತದ ವಿಜಯದ 50 ನೇ ವರ್ಷವನ್ನು ಉಭಯ ರಾಷ್ಟ್ರಗಳು ಆಚರಿಸುತ್ತಿದೆ. ಈ ಯುದ್ಧ ಪಾಕಿಸ್ಥಾನವನ್ನು ಎರಡು ಭಾಗಗಳಾಗಿ ವಿಭಜಿಸಿತು ಮತ್ತು ಬಾಂಗ್ಲಾದೇಶ ಎಂಬ ಹೊಸ ರಾಷ್ಟ್ರವನ್ನು ಸೃಷ್ಟಿಸಿತು. ಇಲ್ಲಿ ಭಾರತೀಯ ಸೇನೆ ನಡೆಸಿದ ತ್ವರಿತ ಕಾರ್ಯಾಚರಣೆ ಮಿಲಿಟರಿ ಇತಿಹಾಸದಲ್ಲೇ ಅತ್ಯಂತ ಕಡಿಮೆ ಮತ್ತು ವೇಗದ ಕಾರ್ಯಾಚರಣೆಗಳಲ್ಲಿ ಒಂದಾಗಿದೆ.
ಬಾಂಗ್ಲಾದೇಶದ ರಚನೆಯ ಹೊರತಾಗಿ, ಭಾರತದ ಗೆಲುವು ಐತಿಹಾಸಿವಾಗಿದೆ. ಯಾಕೆಂದರೆ, ಯುದ್ಧದ ಸೋಲಿನ ಬಳಿಕ ಪಾಕಿಸ್ಥಾನದ ಅಂದಿನ ಸೇನಾ ಮುಖ್ಯಸ್ಥ ಜನರಲ್ ಅಮೀರ್ ಅಬ್ದುಲ್ಲಾ ಖಾನ್ ನಿಯಾಜಿ ಮತ್ತು ಅವರ 93,000 ಪಾಕಿಸ್ಥಾನಿ ಪಡೆಗಳು ಭಾರತೀಯ ಸೇನೆಗೆ ಶರಣಾಯಿತು.
ಜನವರಿ 26 ರಂದು, ಭಾರತವು ತನ್ನ 72 ನೇ ಗಣರಾಜ್ಯೋತ್ಸವವನ್ನು ಅಚರಿಸುತ್ತಿರುವ ಐತಿಹಾಸಿಕ ಕ್ಷಣದಲ್ಲಿ ಬಾಂಗ್ಲಾ ಸೇನೆ ಭಾಗಿಯಾಗುತ್ತಿರುವುದು ವಿಶೇಷ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.