ಗುವಾಹಟಿ: ಪ್ರತಿಪಕ್ಷಗಳು ಸದನ ಬಿಟ್ಟು ಹೊರನಡೆದರೂ ಕೂಡ ಎಲ್ಲಾ ಸರ್ಕಾರಿ ಮದರಸಾಗಳನ್ನು ಸಾಮಾನ್ಯ ಶಾಲೆಗಳಾಗಿ ಪರಿವರ್ತಿಸುವ ಮಸೂದೆಯನ್ನು ಅಸ್ಸಾಂ ಅಸೆಂಬ್ಲಿ ಬುಧವಾರ ಅಂಗೀಕರಿಸಿದೆ.
ಪ್ರತಿಪಕ್ಷ ಕಾಂಗ್ರೆಸ್ ಮತ್ತು ಅಖಿಲ ಭಾರತ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಈ ಮಸೂದೆ ಕುರಿತ ಸರಿಯಾದ ಚರ್ಚೆಗಾಗಿ ಮಸೂದೆಯನ್ನು ವಿಧಾನಸಭೆಯ ಆಯ್ಕೆ ಸಮಿತಿಗೆ ಕಳುಹಿಸುವಂತೆ ಕೋರಿತ್ತು. ಆದರೆ, ಸ್ಪೀಕರ್ ಹಿತೇಂದ್ರ ನಾಥ್ ಗೋಸ್ವಾಮಿ ಈ ಬೇಡಿಕೆಯನ್ನು ತಿರಸ್ಕರಿಸಿದರು ಮತ್ತು ಮಸೂದೆಯನ್ನು ಧ್ವನಿ ಮತಕ್ಕಾಗಿ ಮಂಡಿಸಿದರು. ನಂತರ, ಅದನ್ನು ಅಂಗೀಕರಿಸಲಾಯಿತು.
ರಾಜ್ಯ ಸರ್ಕಾರದ ಭಾಗವಾಗಿರುವ ಬಿಜೆಪಿ, ಅಸೋಮ್ ಗಣ ಪರಿಷತ್ ಮತ್ತು ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್ ಇದರ ಪರವಾಗಿ ಮತ ಚಲಾಯಿಸಿದವು.
ಮದರಸಾ ಸಂಸ್ಥೆಗಳನ್ನು ಈಗ ಪ್ರಾಥಮಿಕ, ಉನ್ನತ ಮತ್ತು ಉನ್ನತ ಮಾಧ್ಯಮಿಕ ಶಾಲೆಗಳಾಗಿ ಪರಿವರ್ತಿಸಲಾಗುವುದು ಮತ್ತು ಅಲ್ಲಿನ ಬೋಧನೆ ಮತ್ತು ಬೋಧಕೇತರ ಸಿಬ್ಬಂದಿಗಳ ಸ್ಥಾನಮಾನ ಮತ್ತು ವೇತನ, ಭತ್ಯೆ ಮತ್ತು ಸೇವಾ ಪರಿಸ್ಥಿತಿಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗುವುದಿಲ್ಲ.
ಅಸ್ಸಾಂನಲ್ಲಿ ಮದರಸಾ ಶಿಕ್ಷಣವನ್ನು 1915 ರಲ್ಲಿ ಪರಿಚಯಿಸಲಾಯಿತು. ರಾಜ್ಯ ಸರ್ಕಾರವು ವಾರ್ಷಿಕವಾಗಿ 260 ಕೋಟಿ ರೂ. ಇದಕ್ಕಾಗಿ ವ್ಯಯಿಸುತ್ತದೆ. ಈ ವರ್ಷದ ಫೆಬ್ರವರಿಯಲ್ಲಿ “ಜಾತ್ಯತೀತ ದೇಶದಲ್ಲಿ ಸರ್ಕಾರದ ಹಣದಿಂದ ಧಾರ್ಮಿಕ ಬೋಧನೆಗಳನ್ನು ನೀಡಲು ಸಾಧ್ಯವಿಲ್ಲ” ಎಂದು ಸರ್ಕಾರ ಹೇಳಿತ್ತು. ಹೀಗಾಗಿ ಸರ್ಕಾರಿ ಮದರಸಗಳನ್ನು ಶಾಲೆಗಳಾಗಿ ಪರಿವರ್ತಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.