ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು 2020 ರ ಡಿಸೆಂಬರ್ 28 ರಂದು ಮಧ್ಯಾಹ್ನ 4.30 ಕ್ಕೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಹಾರಾಷ್ಟ್ರದ ಸಂಗೋಲ ಮತ್ತು ಪಶ್ಚಿಮ ಬಂಗಾಳದ ಶಾಲಿಮಾರ್ ನಡುವೆ ಸಂಚರಿಸಲಿರುವ 100ನೇ ಕಿಸಾನ್ ರೈಲಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ.
ಬಹು ಸಾಮಗ್ರಿಯ ಈ ರೈಲು ಸೇವೆಯಲ್ಲಿ ತರಕಾರಿ ಅಂದರೆ ಹೂಕೋಸು, ದೊಣ್ಣೆಮೆಣಸಿನಕಾಯಿ, ಎಲೆ ಕೋಸು, ನುಗ್ಗೆಕಾಯಿ, ಮೆಣಸಿನಕಾಯಿ, ಈರುಳ್ಳಿ ಮತ್ತು ಹಣ್ಣುಗಳಾದ ದ್ರಾಕ್ಷಿ, ಕಿತ್ತಲೆ, ದಾಳಿಂಬೆ, ಬಾಳೆಹಣ್ಣು, ಮರಸೇಬು ಇತ್ಯಾದಿಯನ್ನು ಸಾಗಿಸಲಿದೆ. ಬೇಗ ಹಾಳಾಗುವ ಸರಕುಗಳನ್ನು ಲೋಡ್ ಮಾಡಲು ಮತ್ತು ಇಳಿಸಲು ಪ್ರಮಾಣದ ಮೇಲೆ ಯಾವುದೇ ನಿರ್ಬಂಧವಿಲ್ಲದ ಎಲ್ಲಾ ನಿಲುಗಡೆಗಳಲ್ಲಿ ಅನುಮತಿಸಲಾಗುತ್ತದೆ. ಭಾರತ ಸರ್ಕಾರ, ಹಣ್ಣುಗಳು ಮತ್ತು ತರಕಾರಿಗಳ ಸಾಗಣೆಗೆ ಶೇ.50 ಸಹಾಯಧನವನ್ನು ವಿಸ್ತರಿಸಿದೆ.
ಪ್ರಥಮ ಕಿಸಾನ್ ರೈಲನ್ನು 2020ರ ಆಗಸ್ಟ್ 7ರಂದು ದೇವಾಲೈನಿಂದ ದನಾಪುರದವರೆಗೆ ಪರಿಚಯಿಸಲಾಯಿತು, ನಂತರ ಅದನ್ನು ಮುಜಾಫರ್ಪುರವರೆಗೆ ವಿಸ್ತರಿಸಲಾಯಿತು. ರೈತರಿಂದ ಉತ್ತಮ ಸ್ಪಂದನೆ ದೊರೆತ ಹಿನ್ನೆಲೆಯಲ್ಲಿ, ರೈಲಿನ ಆವರ್ತನೆಯನ್ನು ಸಹ ವಾರಕ್ಕೊಮ್ಮೆಯ ಬದಲು ವಾರದಲ್ಲಿ ಮೂರು ದಿನಗಳಿಗೆ ಹೆಚ್ಚಿಸಲಾಗಿದೆ. ಕಿಸಾನ್ ರೈಲು ಕೃಷಿ ಉತ್ಪನ್ನಗಳನ್ನು ದೇಶದಾದ್ಯಂತ ತ್ವರಿತವಾಗಿ ಸಾಗಿಸುವುದನ್ನು ಖಾತ್ರಿಪಡಿಸುವಲ್ಲಿ ಮಹತ್ವದ್ದಾಗಿದೆ. ಇದು ಬೇಗ ನಾಶವಾಗುವ ಉತ್ಪನ್ನಗಳ ತಡೆರಹಿತ ಸಾಗಾಟದ ಸರಪಳಿ ಒದಗಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.