ನವದೆಹಲಿ: ‘ಉತ್ತಮ ಆಡಳಿತ ದಿನ’ವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 9 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ 18,000 ಕೋಟಿ ರೂಪಾಯಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಒಂದು ಗುಂಡಿಯನ್ನು ಒತ್ತಿ ನೇರ ಜಮೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮೋದಿ, “ಇಂದು ರೈತರ ಖಾತೆಗೆ ಆರ್ಥಿಕ ನೆರವು ನೇರವಾಗಿ ಜಮೆಯಾಗಿದೆ. ಯಾವುದೇ ಮಧ್ಯವರ್ತಿಗಳು, ಕಮಿಷನ್ ಇದಕ್ಕೆ ಇಲ್ಲ” ಎಂದಿದ್ದಾರೆ.
“ರೈತರು ಸಂತೋಷದಿಂದ ಇದ್ದರೆ ನಮ್ಮೆಲ್ಲರ ಸಂತೋಷ ಹೆಚ್ಚಾಗುತ್ತದೆ. ಇಂದು ಅತ್ಯಂತ ಪವಿತ್ರವಾದ ದಿನ. ಏಕಾದಶಿ, ಗೀತಾ ಜಯಂತಿಯನ್ನು ಇಂದು ಆಚರಿಸಲಾಗುತ್ತಿದೆ. ಮದನ್ ಮೋಹನ್ ಮಾಳವೀಯ, ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನವನ್ನೂ ಇಂದು ಆಚರಿಸಲಾಗುತ್ತಿದೆ. ಅಟಲ್ ಜೀ ಗೌರವಾರ್ಥ ಇಂದು ʼಉತ್ತಮ ಆಡಳಿತ ದಿನʼವನ್ನು ಆಚರಿಸಲಾಗುತ್ತಿದೆ” ಎಂದಿದ್ದಾರೆ.
“ಪಶ್ಚಿಮ ಬಂಗಾಳದ ರೈತರ ಬಗ್ಗೆ ಮಾತನಾಡದ ಕೆಲ ಪಕ್ಷಗಳು ದೆಹಲಿಗೆ ಬಂದು ರೈತರ ಪರವಾಗಿ ಮಾತನಾಡುತಿದ್ದಾರೆ. ಈ ಪಕ್ಷಗಳು ಎಪಿಎಂಸಿ-ಮಂಡಿಗಳ ಬಗ್ಗೆ ಭಾರೀ ಒಲವು ತೋರಿಸುತ್ತಿವೆ. ಆದರೆ ಕೇರಳದಲ್ಲಿ ಎಪಿಎಂಸಿ-ಮಂಡಿಗಳು ಇಲ್ಲ ಎಂಬುದನ್ನು ಈ ಪಕ್ಷಗಳು ಮರೆಯುತ್ತಿವೆ. ಈ ಜನರು ಕೇರಳದಲ್ಲಿ ಎಂದಿಗೂ ಹೋರಾಟ ಮಾಡುವುದಿಲ್ಲ” ಎಂದಿದ್ದಾರೆ.
“ದೇಶದ ರೈತರ ವೆಚ್ಚವನ್ನು ಕಡಿಮೆ ಮಾಡುವತ್ತ ನಾವು ಕಾರ್ಯೋನ್ಮುಖರಾಗಿದ್ದೇವೆ. ಮಣ್ಣಿನ ಆರೋಗ್ಯ ಕಾರ್ಡ್, ಯೂರಿಯಾಗೆ ಬೇವಿನ ಲೇಪನ, ಲಕ್ಷಾಂತರ ಸೌರ ಪಂಪ್ಗಳ ಯೋಜನೆ ಪ್ರಾರಂಭವಾಗಿದೆ. ರೈತನಿಗೆ ಉತ್ತಮ ಬೆಳೆ ವಿಮೆ ಸೌಲಭ್ಯವನ್ನು ಕಲ್ಪಿಸಲು ಸರ್ಕಾರ ಪ್ರಯತ್ನಿಸಿದೆ. ಇಂದು, ಕೋಟಿ ರೈತರು ಪಿಎಂ ಬೆಳೆ ವಿಮಾ ಯೋಜನೆಯ ಲಾಭ ಪಡೆಯುತ್ತಿದ್ದಾರೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.