ನವದೆಹಲಿ: ಕೇಂದ್ರ ಇಂಧನ ಸಚಿವ ಆರ್. ಕೆ. ಸಿಂಗ್ ಅವರು ಸೋಮವಾರ ಇಂಧನ ವಲಯದಲ್ಲಿ ಸುಧಾರಣೆಗಳನ್ನು ಘೋಷಣೆ ಮಾಡಿದ್ದಾರೆ. ಈ ಹೊಸ ಸುಧಾರಣೆಗಳು ಗ್ರಾಹಕರಿಗೆ ಹೆಚ್ಚಿನ ಅಧಿಕಾರವನ್ನು ನೀಡಲಿದೆ.
ವಿದ್ಯುತ್ (ಗ್ರಾಹಕ ಹಕ್ಕುಗಳು) ನಿಯಮದಡಿ ಕಡ್ಡಾಯ ಗುಣಮಟ್ಟಗಳನ್ನು ನಿರ್ವಹಣೆ ಮಾಡದ ವಿದ್ಯುತ್ ವಿತರಣಾ ಸಂಸ್ಥೆಗಳ ವಿರುದ್ಧ ಈ ಸುಧಾರಣೆಗಳು ಗ್ರಾಹಕರಿಗೆ ಹೆಚ್ಚಿನ ಹಕ್ಕುಗಳನ್ನು ನೀಡಲಿದೆ ಎಂದು ಸಚಿವರು ತಿಳಿಸಿದ್ದಾರೆ.
“ನಾವು ಜನರ ಪ್ರತಿನಿಧಿಗಳು. ಜನರ ಹಕ್ಕುಗಳಿಗಾಗಿ ಹೋರಾಡುತ್ತೇವೆ. ಇದೇ ಮೊದಲ ಬಾರಿಗೆ ನಾವು ವಿದ್ಯುತ್ ವಲಯ ಗ್ರಾಹಕರಿಗಾಗಿ ಇದೆ, ಗ್ರಾಹಕರು ವ್ಯವಸ್ಥೆಗಾಗಿ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದೇವೆ. ನಾವು ಗ್ರಾಹಕರಿಗೆ ಸೇವೆ ಸಲ್ಲಿಸುತ್ತೇವೆ. ಗ್ರಾಹಕರಿಗೆ ನಾವು ಹಕ್ಕುಗಳನ್ನು ನೀಡಬೇಕು” ಎಂದು ಸಚಿವರು ಹೇಳಿದ್ದಾರೆ.
ಗ್ರಾಹಕರ ಹಕ್ಕುಗಳು ಮತ್ತು ವಿತರಣಾ ಪರವಾನಗಿದಾರರ ಕಟ್ಟುಪಾಡುಗಳು, ಅಸ್ತಿತ್ವದಲ್ಲಿರುವ ಸಂಪರ್ಕದಲ್ಲಿ ಹೊಸ ಸಂಪರ್ಕ ಮತ್ತು ಮಾರ್ಪಾಡುಗಳನ್ನು ನೀಡುವುದು, ಮೀಟರಿಂಗ್ ವ್ಯವಸ್ಥೆ, ಬಿಲ್ಲಿಂಗ್ ಮತ್ತು ಪಾವತಿ, ಸಂಪರ್ಕ ಕಡಿತ ಮತ್ತು ಮರುಸಂಪರ್ಕ, ಪೂರೈಕೆಯ ವಿಶ್ವಾಸಾರ್ಹತೆ, ಗ್ರಾಹಕ, ಪರವಾನಗಿದಾರರ ಕಾರ್ಯಕ್ಷಮತೆಯ ಮಾನದಂಡಗಳು, ಪರಿಹಾರ ಕಾರ್ಯವಿಧಾನ, ಗ್ರಾಹಕ ಸೇವೆಗಳಿಗಾಗಿ ಕಾಲ್ ಸೆಂಟರ್ ಮತ್ತು ಕುಂದುಕೊರತೆ ಪರಿಹಾರ ಕಾರ್ಯವಿಧಾನಗಳನ್ನು ವಿದ್ಯುತ್ (ಗ್ರಾಹಕರ ಹಕ್ಕುಗಳು) ನಿಯಮಗಳು ಒಳಗೊಂಡಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.