ನವದೆಹಲಿ: ಹುತಾತ್ಮರ ಹೆಸರಿನಲ್ಲಿ ಉದ್ಯಾನವನಗಳನ್ನು ರಚಿಸುವಂತೆ ಮತ್ತು ಅವರ ಫೋಟೋಗಳನ್ನು ಅಲ್ಲಿ ಹಾಕುವಂತೆ ಗೃಹ ಸಚಿವಾಲಯ ಅರೆಸೈನಿಕ ಪಡೆಗಳಿಗೆ ಸೂಚಿಸಿದೆ.
“ಎಲ್ಲಾ ಪಡೆಗಳು ಹುತಾತ್ಮರಿಗಾಗಿ ಉದ್ಯಾನವನವನ್ನು ರಚಿಸಬೇಕು ಮತ್ತು ಅರ್ಪಿಸಬೇಕು. ಅವರ ಚಿತ್ರವನ್ನು ಉದ್ಯಾನವನದಲ್ಲಿ ಹಾಕಬೇಕು” ಎಂದು ಕಳೆದ ತಿಂಗಳು ನಡೆದ ಪರಿಶೀಲನಾ ಸಭೆಯ ನಂತರ ಎಂಎಚ್ಎ ಪತ್ರವೊಂದರಲ್ಲಿ ತಿಳಿಸಿದೆ.
ಪುಲ್ವಾಮಾದಂತಹ ದೊಡ್ಡ ಮಟ್ಟದ ಹುತಾತ್ಮತೆಯನ್ನು ಕಂಡಿರುವ ಸ್ಥಳಗಳಲ್ಲಿ ವಿಶೇಷ ಉದ್ಯಾನಗಳನ್ನು ನಿರ್ಮಿಸಲು ಎಂಎಚ್ಎ ಪಡೆಗಳಿಗೆ ನಿರ್ದೇಶನ ನೀಡಿದೆ.
“ಪುಲ್ವಾಮಾದ ಹುತಾತ್ಮರಿಗಾಗಿ ವಿಶೇಷ ಉದ್ಯಾನವನ್ನು ರಚಿಸಬೇಕು ಮತ್ತು ಅದೇ ರೀತಿ ಅನೇಕ ಯೋಧರಿ ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ ಮತ್ತು ಅವರಿಗಾಗಿ ಪೊಲೀಸ್ ಸ್ಮಾರಕದಂತಹ ಪ್ರತಿಮೆಗಳನ್ನು ರಚಿಸಿ ರೈಫಲ್ ಮತ್ತು ಹೆಲ್ಮೆಟ್ ಅನ್ನು ಅಲ್ಲಿ ಸ್ಥಾಪಿಸಬೇಕು , “ಎಂಎಚ್ಎ ತನ್ನ ಪತ್ರದಲ್ಲಿ ತಿಳಿಸಿದೆ.
ಅರೆಸೈನಿಕ ಪಡೆಗಳಿಗಾಗಿ ಉದ್ಯಾನವನ್ನು ರಚಿಸುವ ಬಗ್ಗೆ ಗೃಹ ಸಚಿವ ಅಮಿತ್ ಶಾ ಅವರು ನಡೆಸಿದ ಪರಿಶೀಲನೆಯ ಸಭೆಯ ನಂತರ ನವೆಂಬರ್ 26 ರಂದು ಈ ಪತ್ರವನ್ನು ನೀಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.