ಹೈದರಾಬಾದ್: ತಿರುಪತಿ ತಿರುಮಲ ಪ್ರಸಾದ ಎಂದಾಕ್ಷಣ ನೆನಪಾಗುವುದು ಅಲ್ಲಿನ ಲಡ್ಡು ಪ್ರಸಾದ. ಭಾರೀ ಬೇಡಿಕೆ ಇರುವ ರುಚಿಕರವಾದ ಈ ಲಡ್ಡಿಗೆ 300ರ ಸಂಭ್ರಮ. ಆಗಸ್ಟ್ 1715ರಲ್ಲಿ ಮೊದಲ ಬಾರಿಗೆ ಲಡ್ಡು ಪ್ರಸಾದ ನೀಡುವ ಸಂಪ್ರದಾಯ ಆರಂಭವಾಗಿತು.
ಈ ಲಾಡನ್ನು ಕಡಲೆ ಹಿಟ್ಟು, ತುಪ್ಪ, ಸಕ್ಕರೆ, ಗೋಡಂಬಿ ಒಣ ದ್ರಾಕ್ಷಿ, ಏಲಕ್ಕಿ, ಲವಂಗ, ಒಣಗಿಸಿದ ಹಣ್ಣುಗಳಿಂದ ತಯಾರಿಸಲಾಗುತ್ತಿದ್ದು, ದೇವಸ್ಥಾನದ ಆಡಳಿತ ಮಂಡಳಿಯು 2014ರಲ್ಲಿ ಭಕ್ತಾದಿಗಳಿಗೆ 90 ಲಕ್ಷಕ್ಕೂ ಅಧಿಕ ಲಡ್ಡನ್ನು ಪ್ರಸಾದ ರೂಪದಲ್ಲಿ ವಿತರಿಸಿದೆ. 300 ಗ್ರಾಂ ತೂಕದ ಈ ಲಾಡಿನ ಬೆಲೆ ರೂ.25. ಈ ಲಡ್ಡು ತಯಾರಿಸಲು ಸುಮಾರು 250ಕ್ಕೂ ಅಧಿಕ ಬಾಣಸಿಗರು ಹಾಗೂ 600ಕ್ಕೂ ಅಧಿಕ ಲಾಡು ಉಂಡೆ ತಯಾರಕರು ಇದ್ದಾರೆ. ಹಬ್ಬ- ಹರಿದಿನಗಳಂದು ಸುಮಾರು 5 ಲಕ್ಷ ಲಡ್ಡುಗಳನ್ನು ಸಿದ್ಧಪಡಿಸಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.